ವಯನಾಡು ಸಂತ್ರಸ್ತರಿಗೆ ಸುಳ್ಯ ಸೇವಾ ಭಾರತಿ ವತಿಯಿಂದ ಸಂಗ್ರಹಿಸಿದ ಅಗತ್ಯ ಸಾಮಾಗ್ರಿಗಳ ಹಸ್ತಾಂತರ

0

ಕೇರಳದ ವಯನಾಡಿನಲ್ಲಿ ಸಂಭವಿಸಿರುವ ದುರಂತ ಸ್ಥಳದಲ್ಲಿರುವ ಸಂತ್ರಸ್ತರಿಗಾಗಿ ಸುಳ್ಯ ಸೇವಾ ಭಾರತಿ ವತಿಯಿಂದ ನಗರದ ಅಂಗಡಿ ಅಂಗಡಿಗಳಿಗೆ ತೆರಳಿ ಸಂಗ್ರಹಿಸಿದ ಅಗತ್ಯ ವಸ್ತುಗಳ ಸಾಮಾಗ್ರಿಗಳ ಹಸ್ತಾಂತರ ನಡೆಯಿತು.

ಸುಳ್ಯದಸ್ಥಳೀಯ ಅಂಗಡಿ ಮಾಲಕರುಗಳು ಸಂಪೂರ್ಣ ಸಹಕಾರ ನೀಡಿ ಅಕ್ಕಿ, ಸಾಬೂನು, ಸಕ್ಕರೆ ಮುಂತಾದ ಅವಶ್ಯಕ ಸಾಮಾಗ್ರಿಗಳನ್ನು ನೀಡಿ ಸಹಕರಿಸಿದ್ದರು.

ಈ ಸಂದರ್ಭದಲ್ಲಿ ಸೇವಾ ಭಾರತಿ ಸಂಘಟನೆಯ ಮುಖಂಡರುಗಳಾದ ನವೀನ ಜಟ್ಟಿಪಳ್ಳ, ಸಾಗರ್ ರೈ, ನಾಗರಾಜ್, ಮಧುಸೂದನ್, ಪ್ರಕಾಶ್ ಪಚ್ಚು, ಗುರುದತ್ತ್, ಗಣೇಶ್ ಮೊದಲಾದವರು ಭಾಗವಹಿಸಿದ್ದರು. ಇದರ ಸಾರಥ್ಯವನ್ನು ಮನೋಜ್ ರವರು ವಹಿಸಿಕೊಂಡಿದ್ದರು. ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರು ನಾರಾಯಣ್, ಕಾರ್ಯದರ್ಶಿ ಮನೋಹರ್ ಹಾಗೂ ಸದಸ್ಯರು ಸಹಕಾರ ನೀಡಿದ್ದಾರೆ.