ಮೊರಂಗಲ್ಲು ತರವಾಡು ಮನೆಯ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ

0

ಮೊರಂಗಲ್ಲು ಶ್ರೀ ಧೂಮಾವತಿ ಸಪರಿವಾರ ದೈವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಪ್ರಯುಕ್ತ ವಿಶೇಷ ಪೂಜೆಯು ಇಂದು ನಡೆಯಿತು.

ಆಲೆಟ್ಟಿ ಸದಾಶಿವ ದೇವಸ್ಥಾನದ ಅರ್ಚಕ ಹರ್ಷಿತ್ ಬನ್ನಿಂತಾಯ ರವರು ನಾಗನಿಗೆ ಹಾಲು ಮತ್ತು ಸೀಯಾಳಭಿಷೇಕ ಸಮರ್ಪಿಸಿ ಪೂಜಾ ಕೈಂಕರ್ಯ ನೆರವೇರಿಸಿದರು.
ಮೊರಂಗಲ್ಲು ತರವಾಡು ದೈವಸ್ಥಾನದ ಅಧ್ಯಕ್ಷಎಂ.ಗುರುಪ್ರಸಾದ್ ರೈ ಹಾಗೂ ಕುಟುಂಬದ ಹಿರಿಯ, ಕಿರಿಯ ಸದಸ್ಯರು ಮತ್ತು ಮೊರಂಗಲ್ಲು ಬೈಲಿನವರು ಉಪಸ್ಥಿತರಿದ್ದರು.