ದುಗ್ಗಲಡ್ಕ; ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ

0


ಶ್ರೀ ಕೃಷ್ಣ ಮಂದಿರ ಕೊಯಿಕುಳಿ, ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಯ ಜನ್ಮಾಷ್ಠಮಿ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮ ಮತ್ತು ಕ್ರೀಡಾ ಕೂಟದ ಆಮಂತ್ರಣ ಬಿಡುಗಡೆ ಆ.10ರಂದು ಯುವಕ ಮಂಡಲದ ಕಟ್ಟಡದಲ್ಲಿ ನೆರವೇರಿತು.


ಜಂಟಿ ಸಂಘಗಳ ಸಂಚಾಲಕ ಕೆ.ಟಿ.ವಿಶ್ವನಾಥ ಮತ್ತು ಮಾಜಿ ನ.ಪಂ.ಸದಸ್ಯ ಇಬ್ರಾಹಿಂ ನೀರಬಿದಿರೆ ಆಮಂತ್ರಣ ಬಿಡುಗಡೆ ಮಾಡಿದರು.


ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ, ಕಾರ್ಯದರ್ಶಿ ಕೆ.ಟಿ.ಭಾಗೀಶ್, ಗೌರವಾಧ್ಯಕ್ಷೆ ನವ್ಯ ದಿನೇಶ್ ಕೊಯಿಕುಳಿ, ಕೋಶಾಧಿಕಾರಿ ಪ್ರಿಯಾಸದಾನಂದ, ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ, ಕಾರ್ಯದರ್ಶಿ ಜಯಂತ ಕೊಯಿಕುಳಿ, ಕೋಶಾಧಿಕಾರಿ ಚಂದ್ರನ್ ಕೂಟೇಲು,ಮಾಜಿ ಅಧ್ಯಕ್ಷ ಧನಂಜಯ ಕಲ್ಮಡ್ಕ, ಸುರೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.