ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘದ ಮಾಸಿಕ ಸಭೆ

0

ದಿ.ರಾಮಚಂದ್ರ ಪ್ರಭು ನಾರ್ಣಕಜೆಯವರಿಗೆ ಶ್ರದ್ಧಾಂಜಲಿ

ಸುಳ್ಯ ತಾಲೂಕು ಪಿಗ್ಮಿ ಸಂಗ್ರಾಹಕರ ಸಂಘ ಇದರ ಮಾಸಿಕ ಸಭೆಯು ಆ.10ರಂದು ಸಂಘದ ಕಛೇರಿ ಯಲ್ಲಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘ ದ ಪಿಗ್ಮಿ ಸಂಗ್ರಾಹಕರಾದ ಹಾಗೂ ಗ್ರಾಮ ಪಂಚಾಯತ್ ನ ಸದಸ್ಯರಾದ ದಿ.ರಾಮಚಂದ್ರ ಪ್ರಭು ರವರ ಆತ್ಮಕ್ಕೆ ಚಿರಶಾಂತಿ ಯನ್ನು ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಸಂತ ಬೋರ್ಕರ್, ಕಾರ್ಯದರ್ಶಿ ಸುನಿಲ್ ಜೆ,ಉಪಕಾರ್ಯದರ್ಶಿ ಮಹಾಬಲ ರೈ, ಹಾಗೂ ಲತಾಶ್ರೀ , ಜಯಂತಿ ಸದಸ್ಯರು ಉಪಸ್ಥಿತರಿದ್ದರು.