ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಮಾತೃಭಾರತಿ ಸಮಿತಿ ರಚನೆ

0
   ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನೂತನ ಮಾತೃಭಾರತಿ ಸಮಿತಿಯನ್ನು  ರಚನೆಯಾಯಿತು. 

ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಜಲಜ ಆಚಾರ್ಯ ಶಾಂತಿನಗರ, ಉಪಾಧ್ಯಕ್ಷೆಯಾಗಿ
ಶ್ರೀಮತಿ ಗೀತಾ ಸರಸ್ವತಿ ಮುರೂರು, ಕಾರ್ಯದರ್ಶಿಯಾಗಿ ಪ್ರೌಢಶಾಲಾ ಸಹಶಿಕ್ಷಕಿ ಶ್ರೀಮತಿ ಮಮತ.ಡಿ. , ಸಹ ಕಾರ್ಯದರ್ಶಿಯಾಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಹಶಿಕ್ಷಕಿ ಶ್ರೀಮತಿ ಲೀಲಾವತಿ ಬಿ, ಶ್ರೀಮತಿ ವಿಜಯ ಕಾಳಮನೆ ಆಯ್ಕೆಗೊಂಡರು.

ಸುಮಾರು 40 ಮಂದಿ ಮಾತೆಯರು ಮಾತೃಭಾರತಿ ಸಮಿತಿಯ ಸದಸ್ಯರುಗಳಾಗಿ ಆಯ್ಕೆಯಾದರು.

ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕ ಡಾ. ಗೋಪಾಲಕೃಷ್ಣ ಭಟ್ ಕಾಟೂರು, ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಲತಾ ಮಧುಸೂಧನ್, ಪುರುಷೋತ್ತಮ ಕಿರ್ಲಾಯ ಹಾಗೂ ಸಂಸ್ಥೆಯ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.