ಎಣ್ಮೂರು: ಎಂ.ವೈ.ಎಸ್. ವತಿಯಿಂದ ಸ್ವಾತಂತ್ರ್ಯೋತ್ಸವ

0

ಮುಸ್ಲಿಂ ಯುವಜನ ಸಂಘ ಎಣ್ಮೂರು ಐವತ್ತೊಕ್ಲು ಇದರ ವತಿಯಿಂದ ರಹ್ಮಾನಿಯ ಜುಮಾ ಮಸ್ಜಿದ್ ಎಣ್ಮೂರು ಐವತ್ತೊಕ್ಲು ವಠಾರದಲ್ಲಿ ದೇಶದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಜಮಾಅತ್ ಸಮಿತಿಯ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ ಧ್ವಜಾರೋಹಣಗೈದರು. ಮಸೀದಿಯ ಖತೀಬರಾದ ಅಲ್ಹಾಜ್ ಅಬ್ದುಲ್ಲಾ ಮದನಿಯವರು ದುಆ ಕಾರ್ಯಕ್ರಮ ನೆರವೇರಿಸಿ ಶುಭ ಹಾರೈಸಿದರು. ಸದರ್ ಉಸ್ತಾದರಾದ ಬಹು| ಸಲ್ಮಾನ್ ಫಾರಿಸ್ ಹಿಮಮಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಅಝ್ಝಿನ್ ಉಸ್ತಾದರಾದ ಬಹು| ಮಹಮ್ಮದಲಿ ಸಅದಿಯವರು ಹಾಗೂ ಜಮಾಅತ್ ಸಮಿತಿಯ ಪದಾಧಿಕಾರಿಗಳು, ಊರಿನ ಹಿರಿಯರು, ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಸ್ಲಿಂ ಯುವಜನ ಸಂಘದ ಕಾರ್ಯದರ್ಶಿ ರಶೀದ್ ಅಡಿಬಾಯಿಯವರು ಸ್ವಾಗತಿಸಿ, ಅಧ್ಯಕ್ಷರಾದ ಟಿ.ಎಸ್. ರಫೀಕ್’ರವರು ಧನ್ಯವಾದವಿತ್ತರು.