ಗೂನಡ್ಕ: ಕೆ ಎಂ ಜೆ,ಎಸ್ ವೈ ಎಸ್, ಎಸ್ ಎಸ್ ಎಫ್ ವತಿಯಿಂದ ಸ್ವಾತಂತ್ರೋತ್ಸವ ಕಾರ್ಯಕ್ರಮ

0

ಕರ್ನಾಟಕ ಮುಸ್ಲಿಂ ಜಮಾಅತ್ SYS,SSF ಗೂನಡ್ಕ ಯುನಿಟ್ ವತಿಯಿಂದ 78ನೇ ಸ್ವಾತಂತ್ರೋತ್ಸವದ ದ್ವಜಾರೋಹಣ ಕಾರ್ಯಕ್ರಮ ಇಂದು ನಡೆಯಿತು.ಕಾರ್ಯಕ್ರಮ ದಲ್ಲಿ ಸ್ಥಳೀಯ ಲೈನ್ ಮ್ಯಾನ್ ಗಳಿಗೆ ಸನ್ಮಾನ ಕಾರ್ಯಕ್ರಮವು ಸುನ್ನೀ ಸೆಂಟರ್ ಮುಂಭಾಗದಲ್ಲಿ ನಡೆಯಿತು.

ದ್ವಜರೋಹಣವನ್ನು ಮಾಜಿ ಸೈನಿಕರಾದ ಚಂದ್ರಶೇಕರ ಬೈಲೆ ಪೆಲ್ತಡ್ಕ ಇವರು ನೆರವೇರಿಸಿದರು. ಪ್ರಾಸ್ತಾವಿಕ ಭಾಷಣವನ್ನು ಅಬೂಬಕ್ಕರ್ ಸಖಾಫಿ ಅಲ್ ಅರ್ಶದಿ ಉಸ್ತಾದ್(ಖತೀಬರು BJM ಗೂನಡ್ಕ) ಇವರು ನೆರವೇರಿಸಿದರು.

ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಅಬೂಸಾಲಿ ಗೂನಡ್ಕ , ಸವಾದ್ ಗೂನಡ್ಕ ಸಂದೇಶ ಬಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಮುಹಮ್ಮದ್ ಕುಂಞಿ ಗೂನಡ್ಕ (ಅಧ್ಯಕ್ಷರು BJM ಗೂನಡ್ಕ), ಪ್ರಧಾನ ಕಾರ್ಯದರ್ಶಿ ಎ ಟಿ ಅಶ್ರಫ್,ಕೋಶಾಧಿಕಾರಿ ಖಾದರ್ ಕುಂಬಕ್ಕೊಡ್, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ S M ಅಬ್ದುಲ್ಲಾ, ಕಾರ್ಯದರ್ಶಿ T B ಅಝೀಝ್ , SYS ಅಧ್ಯಕ್ಷ ಹನೀಫ್ ಉಸ್ತಾದ್ , ಕಾರ್ಯದರ್ಶಿ ಹಾರಿಸ್ ಗೂನಡ್ಕ, ಅಲ್ ಅಮೀನ್ ಅಧ್ಯಕ್ಷರಾದ ಸಾದಿಕ್ ಕುಂಬಕ್ಕೋಡ್ ಪ್ರಮುಖರಾದ ಉಮ್ಮರ್ ಪುತ್ರಿ,ಸದರ್ ಉಸ್ತಾದ್ ಲತೀಫ್ ಸಖಾಫಿ,ಅಬ್ದುಲ್ಲ ಕೊಪ್ಪತ ಕಜೆ, ಅಶ್ರಫ್ ಪೆಲ್ತಡ್ಕ, ಜಾಬಿರ್ M B, G M ಅಬ್ದುಲ್ಲ,ಉಫೈಫ್ ದರ್ಕಾಸ್,ವಿಪತ್ತು ನಿರ್ವಹಣಾ ಸಂಘದ ಮುಖಂಡರಾದ ಚಿದಾನಂದ ಮೂಡನಕಜೆ, ಅಶೋಕ ಪೆರಂಗೊಡಿ, ಹಾಗೂ ಹಲವಾರು ಕಾರ್ಯಕರ್ತರು ಬಾಗವಹಿಸಿದರು.

SSF ಗೂನಡ್ಕ ಯೂನಿಟ್ ಅಧ್ಯಕ್ಷ ಇಸಾಕ್ ಗೂನಡ್ಕ ಸ್ವಾಗತಿಸಿ ,SYS DK ಈಸ್ಟ್ ನಾಯಕರಾದ ಸಿದ್ದೀಕ್ ಗೂನಡ್ಕರವರು ದನ್ಯವಾದ ಮಾಡಿದರು.