ಭೀಕರ ಮಳೆಗೆ ಕೆಟ್ಟುಹೋದ ಕರಿಕ್ಕಳ ಕಾಂತುಕುಮೇರಿ ರಸ್ತೆ

0

ಪಂಬೆತ್ತಾಡಿಗೆ ಬಂದ ಶಾಸಕರು ಕಾಂತುಕುಮೇರಿಗೆ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ ಕುಲ್ ದೀಪ್

ಆ. 13ರಂದು‌ ಸುರಿದ ಭೀಕರ ಮಳೆಗೆ ಪಂಬೆತ್ತಾಡಿ ಕಾಂತುಕುಮೇರಿ ರಸ್ತೆಯ ಮಣ್ಣು ಕರಿಗಿ ಹೋಗಿ, ಕೆಲವು ಕಡೆ ಮಣ್ಣು ಬಿದ್ದು ರಸ್ತೆ ಸಂಚಾರಕ್ಕೆ ಅಯೋಗ್ಯವಾಗಿದೆ.
ಪಂಬೆತ್ತಾಡಿಯಲ್ಲಿ ಮನೆ ಮೇಲೆ ಬರೆ ಕುಸಿದು ಬಿದ್ದು, ಮನೆಗೆ ಹಾನಿಯಾಗಿರುವುದನ್ನು ವೀಕ್ಷಿಸಲು ಶಾಸಕಿ ಭಾಗೀರಥಿ ಮುರುಳ್ಯರವರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಕಾಂತುಕುಮೇರಿ ರಸ್ತೆ ವೀಕ್ಷಿಸಲು ಬರುವಂತೆ ಪಂಬೆತ್ತಾಡಿ ಸಹಕಾರಿ ಸಂಘದ ಉಪಾಧ್ಯಕ್ಷ ಕುಲ್ ದೀಪ್ ಸುತ್ತುಕೋಟೆಯವರು ಒತ್ತಾಯಿಸಿದಾಗ ಅವರು ಅನ್ಯ ಕಾರ್ಯ ನಿಮಿತ್ತ ಕಾಂತುಕುಮೇರಿಗೆ ಹೋಗದೇ ವಾಪಾಸು ಹೋದರೆನ್ನಲಾಗಿ. ಈ ಬಗ್ಗೆ ಕುಲ್ ದೀಪ್ ರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.