ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಹಿ .ಪ್ರಾ ಶಾಲೆ ದೇವಚಳ್ಳ ಇಲ್ಲಿ 78 ನೇ ಸ್ವಾತಂತ್ರ್ಯೋತ್ಸವ ನಡೆಯಿತು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ಧ್ವಜಾರೋಹಣ ಮಾಡಿದರು.

ಮುಖ್ಯ ಗುರುಗಳಾದ ಶ್ರೀಧರ ಗೌಡ ಕೆ ಎಲ್ಲರಿಗೂ ಶುಭಾಶಯ ಸಲ್ಲಿಸಿದರು.

ನಂತರ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಾ ಎಲಿಮಲೆಯಿಂದ ಎತ್ತಿನಹೊಳೆ ವರೆಗೆ ರಾಷ್ಟ್ರ ನಾಯಕರ ವೇಷದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು.

ನಂತರ ಸಭಾಕಾರ್ಯಕ್ರಮ ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಜಯಾನಂದ ಪಟ್ಟೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದಿವಾಕರ ನಾಯಕ್ ಎರ್ಮೆಟ್ಟಿ ಮಾಜಿ ಗ್ರಾ. ಪಂ. ಅಧ್ಯಕ್ಷರು ನೆ. ಕೆಮ್ರಾಜೆ, ಸೀತಾರಾಮ ಮೇಲ್ವಿಚಾರಕರು ಧ. ಗ್ರಾ. ಯೋಜನೆ, ಎಂ. ಕೆ ಮಹಮ್ಮದ್ ಕುಂಞಿ, ರಾಜೇಶ್ ಬಟ್ಟಕಜೆ ಪೂರ್ವ ಪ್ರಾಥಮಿಕ ತಗತಿಯ ಪೋಷಕರ ಸಮಿತಿಯ ಅಧ್ಯಕ್ಷರು, ಶ್ರೀಧರ ಗೌಡ ಕೆ ಮುಖ್ಯಗುರುಗಳು ವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ನೀಡಲ್ಪಟ್ಟ ಸಿಹಿ ತಿಂಡಿಗಳನ್ನು ನೀಡಲಾಯಿತು. ಶಿಕ್ಷಕಿ ಶ್ರೀಮತಿ ಹರಿಣಾಕ್ಷಿ ಪಿ. ಎ ರವರು ಸ್ವಾಗತಿಸಿದರು, ಶಿಕ್ಷಕಿ ಹರಿಣಾಕ್ಷಿ ಹೆಚ್ ಎಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಜೀವನ್ ಕುಮಾರ್ ಟಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.