ಬಾಂಜಿಕೋಡಿಯಲ್ಲಿ ಕಲ್ಪಾಮೃತ ಶುದ್ಧ ತೆಂಗಿನ ಎಣ್ಣೆ ಮತ್ತು ಫ್ಲೋರ್ ಮಿಲ್ ಶುಭಾರಂಭ

0

ಐವರ್ನಾಡಿನ ಬಾಂಜಿಕೋಡಿ ಚೆಮ್ನೂರು ಕಾಂಪ್ಲೆಕ್ಸ್ ನಲ್ಲಿ ಕಲ್ಪಾಮೃತ ಶುದ್ಧ ತೆಂಗಿನ ಎಣ್ಣೆ ಮತ್ತು ಫ್ಲೋರ್ ಮಿಲ್ ಆ.18 ರಂದು ಶುಭಾರಂಭಗೊಂಡಿತು.


ಐವರ್ನಾಡು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ,ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥರವರು ದೀಪ ಬೆಳಗಿಸಿ ಉದ್ಘಾಟಿಸಿ ಈ ಭಾಗದ ಜನರ ದೈನಂದಿನ ವ್ಯವಹಾರಕ್ಕೆ ತೆಂಗಿನ ಎಣ್ಣೆಯ ಅವಶ್ಯಕತೆಯಿದೆ.ನೂತನ ಸಂಸ್ಥೆ ಜನರ ಮನವನ್ನು ,ಗಮನವನ್ನು ಗೆದ್ದು ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.


ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್,ಐವರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ,ಸದಸ್ಯ ರಂಜನ್ ಮೂಲೆತೋಟ,ಹಿರಿಯರಾದ ಕೃಷ್ಣಪ್ಪ ಗೌಡ ಚೆಮ್ನೂರು,ವಾಸುದೇವ ಚೆಮ್ನೂರು,ಕಟ್ಟಡ ಮಾಲಕರಾದ ಶ್ರೀಮತಿ ದೇವಕಿ ಬಾಲಕೃಷ್ಣ ಚೆಮ್ನೂರು ಉಪಸ್ಥಿತರಿದ್ದು ಶುಭಹಾರೈಸಿದರು.


ಪೆರಾಜೆ ಜ್ಯೋತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವೇಣುಗೋಪಾಲ ಕೊಯಿಂಗಾಜೆ ಶುಭಹಾರೈಸಿದರು.


ಶ್ರೀಮತಿ ಪ್ರತೀಕ್ಷಾ ಸ್ವಾಗತಿಸಿ,ಚಿದಾನಂದ ಬಾಂಜಿಕೋಡಿ ಪ್ರಾರ್ಥಿಸಿ,ಶ್ರೀಮತಿ ಸಾಯಿಪ್ರಿಯ ಸುದೇಶ್ ವಂದಿಸಿದರು.


ಮಾಲಕರಾದ ಸುದೇಶ್ ಚೆಮ್ನೂರು,ಸುಭಾಶ್ ಚೆಮ್ನೂರು,ತೀರ್ಥಪ್ರಸಾದ್ ಶೀರಡ್ಕ ಹಾಗೂ ಹಲವು ಜನ ಗಣ್ಯರು ಉಪಸ್ಥಿತರಿದ್ದರು.

ಇಲ್ಲಿ ಶುದ್ಧ ತೆಂಗಿನ ಎಣ್ಣೆ ದೊರೆಯುತ್ತದೆ ಹಾಗೂ ಅಕ್ಕಿ,ಗೋಧಿ,ಜೋಳ,ರಾಗಿ,ಮೆಣಸು,ಕೊತ್ತಂಬರಿ,ಅರಶಿನ,ಕರಿಮೆಣಸು,ಬೇಬಿ ಫುಡ್ ಮತ್ತು ಮಸಾಲೆಗಳನ್ನು ಹುಡಿ ಮಾಡಿ ಕೊಡಲಾಗುವುದು‌ ಎಂದು ಮಾಲಕರು ತಿಳಿಸಿದ್ದಾರೆ.