ದೇವರಮಜಲಿನಲ್ಲಿ ಮೋರಿ ಕುಸಿತ – ಎಡಮಂಗಲ ಸಂಪರ್ಕ ಕಡಿತ ಸಾಧ್ಯತೆ

0

ಎಡಮಂಗಲ ಗ್ರಾಮದ ಕೇರ್ಪಡ ದೇವರಮಜಲಿನಲ್ಲಿ ಹಳೆಯ ಕಾಲದ ಇಕ್ಕಟ್ಟಾದ ಮೋರಿ ಇದ್ದು, ಬೊಳ್ಕಜೆ ಬಯಲಿನ ಮಳೆ ನೀರು ಅದೇ ಮೋರಿಯಲ್ಲಿ ಹರಿದು ದೇವರ ಮಜಲಿಗೆ ಹೋಗುತ್ತಿದ್ದು, ಎರಡು ಕಡೆಯ ತಡೆಗೋಡೆಗಳು ಮಳೆ ಪರಿಣಾಮ ಬಿದ್ದು ಹೋಗಿವೆ.

ಕಡಬ- ಎಡಮಂಗಲ -ಅಲೆಕ್ಕಾಡಿ ರಾಜ್ಯ ರಸ್ತೆಯಾಗಿದ್ದು ವಾಹನ ದಟ್ಟನೆ ಕೂಡ ಇರುವುದರಿಂದ, ಪಾಲೋಳಿ ಸೇತುವೆಯಲ್ಲಿ ಸಂಚಾರಕ್ಕೆ ಬಿಟ್ಟಲ್ಲಿ ವಾಹನ ಜಾಸ್ತಿಯಾಗಿ ತೊಂದರೆ ಆಗಬಹುದು. ಆದಷ್ಟು ಬೇಗ ಸಂಬಂಧ ಪಟ್ಟವರು ಇತ್ತ ಗಮನಿಸಿ ರಸ್ತೆ ಬದಿ ಮತ್ತು ಮೋರಿ ತಡೆಗೋಡೆ ಕಲ್ಪಿಸಿ ಕೊಡಬೇಕೆಂದು ಊರಿನವರು ಪತ್ರಿಕೆಗೆ ತಿಳಿಸಿರುತ್ತಾರೆ.