ರಾಜ್ಯಪಾಲರ ಈ ನಡೆ ಕರ್ನಾಟಕದ 7 ಕೋಟಿ ಜನರಿಗೆ ಮಾಡಿದ ಅವಮಾನ

0

ಸಂವಿಧಾನಿಕ ಸಂಸ್ಥೆಯ ಮುಖ್ಯಸ್ಥರಾಗಿ ಸಂವಿಧಾನಕ್ಕೆ ದಕ್ಕೆ ತರುವ ರೀತಿಯಲ್ಲಿ ವರ್ತಿಸಿದ ರಾಜ್ಯಪಾಲಾರ ನಡೆಯನ್ನು ಈ ಮೂಲಕ ಖಂಡಿಸುತ್ತೇನೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಭರತ್ ಮುಂಡೋಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಧೆಯಂತೆ ಕರ್ನಾಟಕದ ಜನತೆ ಆಯ್ಕೆ ಮಾಡಿದ ಸರ್ಕಾರದ ಮುಖ್ಯಸ್ಥರಾದ ಮುಖ್ಯಮಂತ್ರಿಗಳ ಮೇಲೆ ರಾಜಕೀಯ ಪ್ರೇರಿತ ಅಪಾದನೆಯ ತನಿಖೆಗೆ ಆದೇಶ ನೀಡುವ ಮೂಲಕ ರಾಜ ಭವನದ ಘನತೆಗೆ ಅಗೌರವ ಮಾಡಿದಂತಾಗಿದೆ. ರಾಜ್ಯಪಾಲಾರ ಈ ನಡೆ ಕರ್ನಾಟಕದ 7 ಕೋಟಿ ಜನರಿಗೆ ಮಾಡಿದ ಅವಮಾನ ಎಂದವರು ತಿಳಿಸಿದ್ದಾರೆ.