ಮೇನಾಲ ವಿಷ್ಣು ಗೇಮ್ಸ್ ಕ್ಲಬ್ ವತಿಯಿಂದ ವರಮಹಾಲಕ್ಷ್ಮಿ ಪೂಜೆ-ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ಮೇನಾಲ ವಿಷ್ಣು ಗೇಮ್ಸ್ ಕ್ಲಬ್ ವತಿಯಿಂದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ಅರ್ಚಕ ಶಿವಪ್ರಸಾದ್ ಕೆದಿಲಾಯ ರವರ ನೇತೃತ್ವದಲ್ಲಿ ಮೇನಾಲ ಭಜನಾ ಮಂದಿರದಲ್ಲಿ
ಆ .16 ರಂದು ನಡೆಯಿತು.

ಸಮಿತಿಯ ಅಧ್ಯಕ್ಷೆ
ಶ್ರೀಮತಿ ಪ್ರಜ್ಞಾ ರಾಜೇಶ್ ಶೆಟ್ಟಿ ಮೇನಾಲ ರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯು ನಡೆಯಿತು.
ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ ರವರು ಧಾರ್ಮಿಕ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ವಿಷ್ಣು ಗೇಮ್ಸ್ ಕ್ಲಬ್ ನ ಅಧ್ಯಕ್ಷ ಸುನೀಲ್ ಇರಂತಮಜಲು, ಶ್ರೀ ಕೃಷ್ಣ ಭಜನಾ ಮಂದಿರ ದ ಅಧ್ಯಕ್ಷ ಬಾಲಕೃಷ್ಣ ಪಿ. ಎಸ್ ಉಪಸ್ಥಿತರಿದ್ದರು.
ಕು ಆಪ್ತ ರೈ ಸ್ವಾಗತಿಸಿ.
ಕು. ಸಾಕ್ಷಿ ಪರಿಚಯ ವಾಚಿಸಿದರು.


ಕು ಭೂಮಿಕಾ ವಂದಿಸಿದರು. ಕು. ನಿರೀಕ್ಷಾ ಸುಲಾಯ ಮತ್ತು ಕು ಪೃಥ್ವಿ ಕಾರ್ಯಕ್ರಮ ನಿರೂಪಿಸಿ ದರು.
ಈ ಸಂದರ್ಭದಲ್ಲಿ ಯೋಗದಲ್ಲಿ ವಿಶೇಷ ಸಾಧನೆ ಮಾಡಿದ ಬಾಲಕ ಆಶ್ರಿತ್ ಆಮೆಮನೆ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಸಾಧನೆ ಮಾಡಿದ ಕು. ವೈಷ್ಣವಿ ಮೇನಾಲ ಹಾಗೂ ಕುಣಿತ ಭಜನೆ ತರಬೇತುದಾರ ನಿಖಿಲ್ ಕುಲಾಲ್ ಆರಂಬೂರು, ಸಮಿತಿಯ ಗೌರವ ಸಲಹೆಗಾರ ಬಾಲಕೃಷ್ಣ ಪಿ .ಎಸ್ ರವರನ್ನು ಸನ್ಮಾನಿಸಲಾಯಿತು.
ಆಗಮಿಸಿದ ಭಕ್ತಾದಿಗಳಿಗೆ ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆಯು ನಡೆಯಿತು. ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನವಾಯಿತು.