ಎಡಮಂಗಲದ ಮಾಲೆಂಗಿರಿ ಸೇತುವೆ ತಾತ್ಕಾಲಿಕ ಸಂಪರ್ಕ ಕಾರ್ಯ ಆರಂಭ

0

ಆ. 13 ರಂದು‌ ಸುರಿದ ರಣಭೀಕರ ಮಳೆಗೆ ಎಡಮಂಗಲ ಗ್ರಾಮದ ಮುಖ್ಯ ರಸ್ತೆಯ ಮಾಲೆಂಗಿರಿ ಸೇತುವೆಯ ಅಡಿಭಾಗ ಕುಸಿದು ಎಡಮಂಗಲ ಸಂಪರ್ಕ ಕಡಿತಗೊಂಡಿದ್ದು, ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯ ಆ. 20ರಿಂದ ಆರಂಭಗೊಂಡಿದೆ.


ಅಲೆಕ್ಕಾಡಿ ಭಾಗದಿಂದ ಎಡಮಂಗಲ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಇದಾಗಿದ್ದು, ಸಂಪರ್ಕ ಕಡಿತದ ಬಳಿಕ ಎಡಮಂಗಲ ದ್ವೀಪದಂತಾಗಿತ್ತು. ಶಾಸಕಿ ಕು. ಭಾಗೀರಥಿ ಮುರುಳ್ಯರವರು ತಾತ್ಕಾಲಿಕ ಸಂಪರ್ಕಕ್ಕೆ ರೂ. 1 ಲಕ್ಷ ಮತ್ತು ಶಾಶ್ವತ ಸೇತುವೆ ನಿರ್ಮಾಣಕ್ಕೆ ರೂ. 50 ಲಕ್ಷ ಅನುದಾನ ನೀಡುವುದಾಗಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಸಂಪರ್ಕದ ಕೆಲಸ ಆರಂಭಗೊಂಡಿದೆ.