ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ದೆಯಲ್ಲಿಅಭಿನಂದನ್, ಚಂದನ್ , ದಕ್ಷಾ ರಿಗೆ ಪದಕ

0

ಕರ್ನಾಟಕ ರಾಜ್ಯ ವೈಟ್ ಲಿಫ್ಟರ್ಸ್ ಸಂಸ್ಥೆ ಬೆಂಗಳೂರು ಇವರ ಮಾನ್ಯತೆ ಯೊಂದಿಗೆ ಮೈಸೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಅಭಿನಂದನ್ ಬಿ.ಎಸ್. ಇವರು 73
ಕೆ.ಜಿ. ಗ್ರೂಪ್ ನ ಜೂನಿಯರ್ ಸೆಕ್ಷನ್ ನಲ್ಲಿ ಪ್ರಥಮ ಸ್ಥಾನ ಚಿನ್ನದ ಪದಕ ಪಡೆದಿರುತ್ತಾರೆ.

ಇವರು ನೆಹರು ಮೆಮೋರಿಯಲ್ ಕಾಲೇಜ್ ಸುಳ್ಯದಲ್ಲಿ ಪ್ರಥಮ ವರ್ಷದ ವಾಣಿಜ್ಯ ಪದವಿ ವಿದ್ಯಾರ್ಥಿಯಾಗಿದ್ದಾರೆ. ಇವರು ಐವರ್ನಾಡು ಗ್ರಾಮದ ಬಾಂಜಿಕೋಡಿ ನಿವಾಸಿ ಚಾತುಬಾಯಿ ಸದಾಶಿವ ಗೌಡ ಮತ್ತು ಶ್ರೀಮತಿ ನಯನ ದಂಪತಿ ಪುತ್ರ.


ಅದೇ ಕಾಲೇಜಿನ ದ್ವಿತೀಯ ವಾಣಿಜ್ಯ ಪದವಿ ವಿದ್ಯಾರ್ಥಿ ಚಂದನ್ ಸಿ.ಪಿ. ಇವರು 109 ಕೆ.ಜಿ. ಗ್ರೂಪ್ ನ ಜೂನಿಯರ್ ಸೆಕ್ಷನ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ತುಮಕೂರಿನ ತುರುವೇಕೆರೆ ತಾಲೂಕಿನ ಬಾನಸಂದ್ರ ಗ್ರಾಮದ ಪುಟ್ಟ್ಟೇ ಗೌಡ ,ಯಶೋದಾ ದಂಪತಿಯ ಪುತ್ರ .


ಸುಳ್ಯ ಜೂನಿಯರ್ ಕಾಲೇಜಿನ ಪ್ರೌಢ ಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಕುl ದಕ್ಷಾ ಆರ್. ಶೆಟ್ಟಿ ಇವರು 49 ಕೆ.ಜಿ. ಗ್ರೂಪ್ ನ ಯೂತ್ ಸೆಕ್ಷನ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಬೀರಮಂಗಲದ ರವಿಕುಮಾರ್ – ಸುಲೋಚನಾ ದಂಪತಿಯ ಪುತ್ರಿ.

ಸ್ಪರ್ಧಿಗಳಿಗೆ ಮಾಜಿ ರಾಷ್ಟ್ರೀಯ ಚಾಂಪಿಯನ್ , ವೈಟ್ ಲಿಫ್ಟರ್ ಆಗಿರುವ ಕೆ.ಎಫ್.ಡಿ.ಸಿ. ಅಧಿಕಾರಿ ಎ.ರಮೇಶ್ ಇವರು ಕ್ರೀಡಾ ಮತ್ತು ಕಲಾ ಸಂಘ ಸುಳ್ಯದ ಜಿಮ್ನೇಶಿಯಂ ನಲ್ಲಿ ತರಬೇತಿ ನೀಡಿರುತ್ತಾರೆ.