ಸೆ.01 : ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಂಗಣ ಉದ್ಘಾಟನೆ

0

ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಸಭಾಂಗಣ ಹಾಗೂ ಕೊಡಿಯಾಲ ಶಾಖಾ ಕಟ್ಟಡ ಉದ್ಘಾಟನಾ ಸಮಾರಂಭ, ಕೊಡಿಯಾಲ ಶಾಖಾ ಸ್ಥಳ ಮಂಜೂರಾತಿ ಮಾಡಿಸಿದ ಹಿರಿಯ ಸಹಕಾರಿ ಪುಡ್ಕಜೆ ದಿ.ಪಿ.ಭಾಸ್ಕರ ರೈ ಭಾವಚಿತ್ರ ಅನಾವರಣ ,ನಿವೃತ್ತ ಲೆಕ್ಕಿಗ ಯಂ.ರವೀಂದ್ರ ರೈ ಇವರಿಗೆ ವಿದಾಯ ಸಮಾರಂಭವು ಸೆ.01 ರಂದು ಪೂರ್ವಾಹ್ನ ಗಂಟೆ 9.30 ಕ್ಕೆ ಸಂಘದ ಸಭಾಂಗಣದಲ್ಲಿ ನಡೆಯಲಿರುವುದು.


ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ ಕಾರ್ಯಕ್ರಮದ ಸಭಾದ್ಯಕ್ಷತೆ ವಹಿಸಲಿದ್ದಾರೆ.
ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ಗೋದಾಮು ಕಟ್ಟಡದ ಉದ್ಘಾಟನೆ ಮತ್ತು ಭಾವಚಿತ್ರ ಅನಾವರಣ ಮಾಡಲಿದ್ದಾರೆ.
ಸಭಾಂಗಣದ ಉದ್ಘಾಟನೆಯನ್ನು ದ.ಕ.ಜಿ.ಕೇ.ಸ.ಬ್ಯಾಂಕಿನ ನಿರ್ದೇಶಕ ಎಸ್.ಎನ್.ಮನ್ಮಥ ರವರು ನೆರವೇರಿಸಲಿದ್ದಾರೆ.
ದ.ಕ.ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಗ್ರಾಹಕ ಸೇವಾ ಕೇಂದ್ರ ಉದ್ಘಾಟನೆ ಮಾಡಲಿದ್ದಾರೆ.


ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ .ರೈ.,ಕೊಡಿಯಾಲ ಗ್ರಾಮ ಪಂಚಾಯತ್ ಅಧ್ಯಕ್ಷ ಹರ್ಷನ್ ಕೆ.ಟಿ.,ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.


ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ ಎ.ಸುಬ್ರಹ್ಮಣ್ಯ ಭಟ್ ನೆಲ್ಯಾರ ಮನೆ,ಶ್ರೀಮತಿ ವಸಂತಿ ವಿ‌.ಉಪ್ಪಂಗಳ ಮನೆ, ಚನಿಯ ಬಜ ಮನೆ, ಸುಲೈಮಾನ್ ತೋಟದಮೂಲೆ ಹಿರಿಯ ಸಹಕಾರಿಗಳಾದ ಪಿ.ಎಸ್.ಚಿದಾನಂದ ರಾವ್ ಪಾಟಾಜೆ, ಪಿ.ಮಂಜುನಾಥ ಆಳ್ವ ಪುಡ್ಕಜೆ, ಎಲ್ಯಣ್ಣ ಪೂಜಾರಿ ದಾಸನಮಜಲು, ಶಂಕರನಾರಾಯಣ ಭಟ್ ಕುರುಂಬುಡೇಲು ಉತ್ತಮ ಕೃಷಿಕ ದಯಾನಂದ ಗೌಡ ಜೆ.ಕಾನಾವುಜಾಲು ಪೆರುವಾಜೆ, ಕುಂಞಣ್ಣ ಶೆಟ್ಟಿ ಕೊಡಿಯಾಲ ಮಾಜಿ ಅಧ್ಯಕ್ಷರಾದ ಪಿ.ಮಹಾಲಿಂಗ ಭಟ್ ಕುರುಂಬುಡೇಲು, ಬಿ.ದಯಾಕರ ಆಳ್ವ ಬೋಳಕುಮೇರು, ಶ್ರೀಮತಿ ಪ್ರೇಮಲತಾ ಬಿ.ರೈ ಪುಡ್ಕಜೆ,ಕರುಣಾಕರ ಆಳ್ವ ಬೇರ್ಯ,ಪಿ.ಗಂಗಾಧರ ರೈ ಪುಡ್ಕಜೆ,ಅನಿಲ್ ಕುಮಾರ್ ರೈ ಚಾವಡಿಬಾಗಿಲು ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಜಾರಿಗಳಾದ ಸುಬ್ರಹ್ಮಣ್ಯ ಕಲ್ಚಾರ್,ಈಶ್ವರ ಆಳ್ವ ಬೇರ್ಯ,ನಿವೃತ್ತ ಲೇಖಪಾಲರಾದ ಸುಬ್ಬಣ್ಣ ರೈ ತಂಬಿನಮಕ್ಕಿ, ದಿವಾಕರ ರೈ ಮರಿಕೇಯಿ ನಿವೃತ್ತ ಗುಮಾಸ್ತ ಕೆ.ಜತ್ತಪ್ಪ ಪಡ್ಪು
ಇವರನ್ನು ಸನ್ಮಾನಿಸಲಾಗುವುದು.


ಸಂಘದ 2023-2024 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.01 ರಂದು ಅಪರಾಹ್ನ ಗಂಟೆ 2.30 ಕ್ಕೆ ಸರಿಯಾಗಿ ಸಂಘದ ನೂತನ ಸಭಾಭವನದಲ್ಲಿ ಸಂಘದ ಅಧ್ಯಕ್ಷರಾದ ಶ್ರೀರಾಮ ಪಿ.ಸಿ.ಇವರ ಅಧ್ಯಕ್ಷತೆಯಲ್ಲಿ ಜರಗಲಿರುವುದು.
ಎಲ್ಲಾ ಸದಸ್ಯರು ಸಭೆಗೆ ಸಕಾಲಕ್ಕೆ ಹಾಜರಾಗಬೇಕೆಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಿ.ವಿಜಯ ರೈ ತಿಳಿಸಿದ್ದಾರೆ.