ಸಂಪಾಜೆ: ವಲಯ ಕಾಂಗ್ರೆಸ್ ಮುಖಂಡರ ಸಭೆ

0

ಮುಂದಿನ ಕಾರ್ಯಯೋಜನೆಯ ಕುರಿತು ಚರ್ಚೆ

ಸಂಪಾಜೆ ವಲಯ ಕಾಂಗ್ರೆಸ್ ಮುಖಂಡರ ಸಭೆಯು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅವರ ಅಧ್ಯಕ್ಷತೆಯಲ್ಲಿ ಆ.24ರಂದು ಕಲ್ಲುಗುಂಡಿಯ ಸಮನ್ವಯ ಸಹಕಾರಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಂದಿನ ಕಾರ್ಯ ಯೋಜನೆಗಳು ಹಾಗೂ ವಿವಿಧ ಘಟಕಗಳ ಪುನರ್ ರಚನೆಯ ಬಗ್ಗೆ ಗ್ರಾಮದ ಪ್ರಮುಖ ಕಾಂಗ್ರೆಸ್ ನಾಯಕರುಗಳ ಉಪಸ್ಥಿತಿಯಲ್ಲಿ ಚರ್ಚಿಸಲಾಯಿತು.

ಮುಂದಿನ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಪಕ್ಷವನ್ನು ಬಲಿಸ್ಟ ಪಡಿಸಿಕೊಳ್ಳುವುದು, ಪಂಚ ಗ್ಯಾರಂಟಿ ಬಾರದ ಫಲಾನುಭವಿಗಳಿಗೆ ಯೋಜನೆ ಸವಲತ್ತು ಬರುವಂತೆ ಮಾಡುವುದರ ಕುರಿತಂತೆ ಚರ್ಚಿಸಲಾಯಿತು.

ಪಕ್ಷದ ವಲಯ ಮಹಿಳಾ ಕಾಂಗ್ರೆಸ್, ಅಲ್ಪ ಸಂಖ್ಯಾತ , ಯುವ ವಲಯ , ಎಸ್ಸಿ, ಎಸ್ಟಿ ವಲಯ ಕಾಂಗ್ರೆಸ್ ನ್ನು ಬಲಿಷ್ಠ ಮತ್ತು ಮುಂತಾದ ಬಗ್ಗೆ ಚರ್ಚಿಸಲಾಯಿತು.

ಕರ್ನಾಟಕ ಸರ್ಕಾರದಿಂದ ನೇಮಕಗೊಂಡ ಜಿಲ್ಲಾ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಭರತ್ ಮುಂಡೋಡಿ, ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಸಂಘದ ಸದಸ್ಯ ಕೆ
ಪಿ ಜಾನಿ, ತಾಲೂಕು ಗ್ಯಾರೆಂಟಿ ಅಧ್ಯಕ್ಷ ಹಮೀದ್ ಕುತ್ತಮೊಟ್ಟೆ, ಸದಸ್ಯ ರಾಜು ನೆಲ್ಲಿ ಕುಮೇರಿ , ಕಾಂತಿ ಬಿ.ಎಸ್ ಅವರಿಗೆ ಸೆ.2ರಂದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಅಧ್ಯಕ್ಷತೆಯಲ್ಲಿ ಸನ್ಮಾನ ಕಾರ್ಯಕ್ರಮ ಮಾಡುವ ಕುರಿತು ಚರ್ಚಿಸಲಾಯಿತು.

ಈ ಸಂದರ್ಭ ಸಂಪಾಜೆಯ ಕಾಂಗ್ರೆಸ್ ಪಕ್ಷದ ಪ್ರಮುಖರುಗಳಾದ ಮಹಮ್ಮದ್ ಕುಂಞ ಗೂನಡ್ಕ, ಕೆ.ಪಿ.ಸಿ.ಸಿ. ಸಂಯೋಜಕ ಕೆ.ಪಿ.ಜಾನಿ, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಸುಮತಿ ಶಕ್ತಿವೇಲು, ಎ.ಕೆ.ಇಬ್ರಾಹಿಂ, ಜಗದೀಶ್ ರೈ ಸಂಪಾಜೆ, ಗ್ರಾ.ಪಂ‌. ಉಪಾಧ್ಯಕ್ಷ ಎಸ್.ಕೆ.ಹನೀಫ್, ಪಿ.ಕೆ.ಅಬೂಸಾಲಿ, ಸುಂದರಿ ಮುಂಡಡ್ಕ, ಟಿ.ಐ.ಲೂಕಾಸ್, ತಾಜ್ ಮಹಮ್ಮದ್, ಬಿ.ಎಸ್.ಯಮುನಾ, ಉಷಾ ರಾಮ ನಾಯ್ಕ್, ಲಿಸ್ಸಿ ಮೊನಾಲಿಸಾ, ಕಾಂತಿ ಬಿ.ಎಸ್, ಪಿ.ಎ.ಉಮ್ಮರ್ ಗೂನಡ್ಕ, ಎಚ್.ಎ.ಹಮೀದ್, ರಾಜು ನೆಲ್ಲಿಕುಮೇರಿ, ಎ.ಕೆ.ಹನೀಫ್, ರಹೀಂ ಬೀಜದಕಟ್ಟೆ, ಬೆಂಜಮೀನ್ ಡಿ’ಸೋಜ, ವಸಂತ ಗೌಡ ಪೆಲ್ತಡ್ಕ, ನಾಗಮುತ್ತು ನೆಲ್ಲಿಕುಮೇರಿ ಉಪಸ್ಥಿತರಿದ್ದರು.