ಸಂಪರ್ಕ ಕಡಿತಗೊಂಡಿರುವ ಎಡಮಂಗಲದ ಮಾಲೆಂಗಿರಿ ಸೇತುವೆ, ತಾತ್ಕಾಲಿಕ ಸಂಪರ್ಕ ಕಾರ್ಯ ಪೂರ್ಣ

0

ಆ. 13ರಂದು ಸುರಿದ ಮಳೆಗೆ ಎಡಮಂಗಲ ಗ್ರಾಮದ ಮಾಲೆಂಗಿರಿ ಮುಖ್ಯ ರಸ್ತೆಯ ಸೇತುವೆಯ ಅಡಿಭಾಗದ ಕಲ್ಲು, ಮಣ್ಣು ನೀರಿನಲ್ಲಿ ಕೊಚ್ಚಿಹೋಗಿ ಎಡಮಂಗಲ ಭಾಗಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಶಾಸಕಿ ಭಾಗೀರಥಿ ಮುರುಳ್ಯ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ರೂ. 1 ಲಕ್ಷ ಮತ್ತು ಶಾಶ್ವತ ಸೇತುವೆ ನಿರ್ಮಾಣಕ್ಕೆ 50 ಲಕ್ಷ ಅನುದಾನ ಒದಗಿಸುವುದಾಗಿ ಭರವಸೆ ನೀಡಿದ್ದರು. ಪ್ರಸ್ತುತ ತಾತ್ಕಾಲಿಕ ಸೇತುವೆ ಕಾರ್ಯ ಪೂರ್ಣಗೊಂಡು ವಾಹನ ಸಂಚಾರಕ್ಕೆ ಮುಕ್ತಗೊಂಡಿದೆ.