ಅನಾರೋಗ್ಯ ಪೀಡಿತ ಜೀವನ್ಮರಣ ಹೋರಾಟದಲ್ಲಿರುವ ಮಹಿಳೆಗೆ ಸಹಾಯ ಧನದ ನೆರವಿನ ಯಾಚನೆ

0

ಅರಂತೋಡು ಗ್ರಾಮದ ಅಡ್ಕಬಳೆ ವಿಜಯ್ ಎಂಬವರ ಪತ್ನಿ 28 ವರ್ಷ ಪ್ರಾಯದ ಶ್ರೀಮತಿ ಮಮತಾ ರವರು ಜಿ.ಬಿ.ಸಿಂಡ್ರಾಮ್ಸ್ ಖಾಯಿಲೆಗೆ ತುತ್ತಾಗಿದ್ದು ಇದೀಗ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದು ವೈದ್ಯರು ತಿಳಿಸಿದಂತೆ ಸುಮಾರು 3 ರಿಂದ 4 ಲಕ್ಷ ಹಣದ ಅವಶ್ಯಕತೆ ಇರುವುದರಿಂದ ಬಡತನದ ಕುಟುಂಬವಾಗಿದ್ದು ಅಷ್ಟೊಂದು ಹಣ ಹೊಂದಾಣಿಕೆ ಮಾಡುವ ಪರಿಸ್ಥಿತಿಯಲ್ಲಿ ಇಲ್ಲದಿರುವುದರಿಂದ ಕೊಡುಗೈ ದಾನಿಗಳ ಸಹಕಾರವನ್ನು ಯಾಚಿಸಿರುತ್ತಾರೆ.
ಈಕೆಗೆ 4 ವರ್ಷದ ಹಾಗೂ 8 ತಿಂಗಳ ಪುಟ್ಟ ಮಗುವಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದಾರೆ.
ಈಕೆ ಆಲೆಟ್ಟಿ ಗ್ರಾಮದ ಉಳಿಯ ಪರಿವಾರ ಮಾಯಿಲಪ್ಪ ಗೌಡರ ಪುತ್ರಿ.