ಗೋಕುಲಂ ವಸ್ತ್ರ ಮಳಿಗೆಯಲ್ಲಿ ಶ್ರೀಕೃಷ್ಣ ವೇಷ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ

0

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಗೋಕುಲಂ ಮಕ್ಕಳ ವಸ್ತ್ರ ಮಳಿಗೆ ಮತ್ತು ವೆಂಕಟರಮಣ ದೇವ ಮಂದಿರದ ಸಹಯೋಗದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಆ.18 ರಂದು ಆಯೋಜಿಸಿದ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಆ.27 ರಂದು ಗೋಕುಲಂ ನಲ್ಲಿ ಬಹುಮಾನ ವಿತರಿಸಲಾಯಿತು.

2 ವರ್ಷದೊಳಗಿನ ಮಕ್ಕಳ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಅಚಿಂತ್ಯ ಎಂ ಪ್ರಥಮ, ಹಂಶಿ ದೇವರಗುಂಡ ದ್ವಿತೀಯ, ಜಾನ್ವಿ ತೃತೀಯ, 2-4 ವರ್ಷದ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಕೃತಿ ಶೋಭಾ, ದ್ವಿತೀಯ ದೀಪಾಂಶಿ, ತೃತೀಯ ಅಯಾನ, 4-5 ವರ್ಷದ ಮಕ್ಕಳ ಸ್ಪರ್ಧೆಯಲ್ಲಿ ಪ್ರಥಮ ಅರುಷ್ ಕೋಲ್ಚಾರು, ದ್ವಿತೀಯ ಮನ್ವಿ ಭಟ್, ತೃತೀಯ ಕನ್ವಿತ್ ಕೆ.ವಿ, ರಾಧೆ ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಅರುಷ್ ಕೋಲ್ಚಾರು ಮತ್ತು ಯಶಸ್ವಿ, ದ್ವಿತೀಯ ಮನ್ವಿ ಭಟ್ ಮತ್ತು ಕೃತಿ ಶೋಭಾ, ತೃತೀಯ ದಿಶಾನಿ ಮತ್ತು ದೀಪಾಂಶಿ, ಯಶೋಧ-ಕೃಷ್ಣ ವೇಷ ಸ್ಪರ್ಧೆಯಲ್ಲಿ ಪ್ರಥಮ ಅರುಷ್ ಕೋಲ್ಚಾರು ಮತ್ತು ನವ್ಯ, ದ್ವಿತೀಯ ಆರ್ಯ ಮತ್ತು ಶಿಲ್ಪಾ ಇವರುಗಳು ಬಹುಮಾನ ಮತ್ತು ಗೋಕುಲಂ ವೋಚರ್ ಕಾರ್ಡ್ ಪಡೆದರು. ಮಕ್ಕಳ ಪೋಷಕರು ಭಾಗವಹಿಸಿದರು.

ಸುಳ್ಯ ಹೆಚ್.ಇ.ಎಫ್ ಸ್ಥಾಪಕಾಧ್ಯಕ್ಷ ಕೇಶವ ನಾಯಕ್ ಮತ್ತು ಅಧ್ಯಕ್ಷ ಚಿದಾನಂದ ವಿದ್ಯಾನಗರ ರವರು ಬಹುಮಾನ ವಿತರಿಸಿದರು.


ಅನೂಪ್ ಪೈ ಸ್ವಾಗತಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಹೆಚ್.ಇ.ಎಫ್.ಸದಸ್ಯರಾದ ಚೇತನ್ ಅಮೆಮನೆ, ಮನೋಹರ ಬೊಳ್ಳೂರು, ಶರತ್ ಪರಿವಾರಕಾನ,ಅಜಿತ್ ಅಂಜಿಕ್ಕಾರ್, ಗುರುರಾಜ್ ಭಟ್ ಎಲಿಕ್ಕಳ ಮತ್ತಿತರರು ಉಪಸ್ಥಿತರಿದ್ದರು. ಸಿಬ್ಬಂದಿ ಗಳು ಸಹಕರಿಸಿದರು.