ಮೊಗರ್ಪಣೆ : ಮಿಲಾದ್ ಸಮಿತಿ ರಚನೆ, ಚೇರ್ಮೆನ್ ಅಬ್ದುಲ್ ರಶೀದ್ ಕೆ. ವೈ, ಕನ್ವಿನರ್ ಹಾಗಿ ಹನೀಫ್ ಪೋಸೋಟ್ ಆಯ್ಕೆ

0

ಮೊಗರ್ಪಣೆ ಹಿದಾಯತುಲ್ ಇಸ್ಲಾಂ ಜಮಾಅತ್ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಆಚರಣೆಗಾಗಿ ಮಿಲಾದ್ ಸಮಿತಿಯನ್ನು ಆ 30 ಮದರಸ ಸಭಾಂಗಣದಲ್ಲಿ ರಚಿಸಲಾಯಿತು.

ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯನ್ನು ಸ್ಥಳೀಯ ಮಸ್ಜಿದ್ ಮುದರ್ರಿಸ್ ಹಾಫಿಲ್ ಸೌಕತ್ ಅಲಿ ಸಖಾಫಿ ದುವಾ ನೆರವೇರಸಿ ಉದ್ಘಾಟಿಸಿದರು.

ವರ್ಷಂಪ್ರತಿ ಆಚರಿಸಿಕ್ಕೊಂಡು ಬರುವ ಮಿಲಾದ್ ಸಂಗಮ ಕಾರ್ಯಕ್ರಮವನ್ನು ಈ ವರ್ಷವೂ ಬಹಳ ಯಶಸ್ವಿಯಾಗಿ ನಡೆಸಿ ವಿದ್ಯಾರ್ಥಿಗಳ ಸಾಂಸ್ಕೃತಿ ಕಾರ್ಯಕ್ರಮ,ಮೀಲಾದ್ ಜಾಥಾ,ಮೀಲಾದ್ ಸಂಗಮ,ದುವಾ ಮಜ್ಲಿಸ್ ಮುಂತಾದ ಕಾರ್ಯಕ್ರಮ ಗಳನ್ನು ನಡೆಸಲು ತೀರ್ಮಾನಿಸಲಾಯಿತು.

ಬಳಿಕ ಮೀಲಾದ್ ಸಮಿತಿ ರಚಿಸಿ ಚೇರ್ಮೆನ್ ಆಗಿ ಕೆ ವೈ ಅಬ್ದುಲ್ ರಶೀದ್, ಕನ್ವೀನರಾಗಿ ಹನೀಫ್ ಪೋಸೋಟ್ ರವರನ್ನು ಆಯ್ಕೆ ಮಾಡಲಾಯಿತು.

ವೈಸ್ ಚೇರ್ಮನ್ ಕೆ ಎಮ್ ಬಶೀರ್,ವೈಸ್ ಕನ್ವೀನರ್ ಸಾಧಿಕ್ ಎಂ ಎಚ್, ಕೋಶಧಿಕಾರಿ ನೌಶಾದ್ ಜಯನಗರ, ಸದಸ್ಯರುಗಳಾಗಿ ಸಂಶುದ್ದೀನ್ ಮೂಸಾನ್, ನವಾಜ್ ಪಂಡಿತ್,ಅಝೀಝ್ ಎ ಟು ಝೆಡ್,ಹಸೈನಾರ್ ಜಯನಗರ,ಅಬ್ದುಲ್ಲಾ ಡಿ ಎಂ, ಮಹಮ್ಮದ್ ಅತ್ತಾಸ್, ಇಲ್ಯಾಸ್ ಪಾಜಪಳ್ಳ, ರಶೀದ್ ಸ್ಕ್ರೈನ್ ಇವರನ್ನು ಆಯ್ಕೆ ಮಾಡಲಾಯಿತು.

ವೇದಿಕೆಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸೀ ಫುಡ್, ಮದರಸಾ ಸದರ್ ಮೊಅಲ್ಲಿಮ್ ಅಬ್ದುಲ್ ಕರೀಂ ಸಕಾಫಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಎಸ್ ಯು ಇಬ್ರಾಹಿಂ, ಉಪಾಧ್ಯಕ್ಷ ಸಿಎಂ ಉಸ್ಮಾನ್,ಕಟ್ಟಡ ಸಮಿತಿ ಅಧ್ಯಕ್ಷ ಅಬ್ದುಲ್ ಸಮದ್ ಹಾಜಿ,ಕಾರ್ಯದರ್ಶಿ ಎಸ್ ವೈ ಅಬ್ದುಲ್ ರಹಿಮಾನ್ ರವರು ಸಲಹಾ ಸೂಚನೆ ನೀಡಿದರು.

ನಿರ್ದೇಶಕರುಗಳಾದ ಅಬ್ದುಲ್ ರಹಿಮಾನ್ ಮೊಗರ್ಪಣೆ,ಅಬ್ದುಲ್ ಖಾದರ್ ಮೊದಲಾದವರು ಭಾಗವಹಿಸಿದ್ದರು.