ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ

0

ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಣೆ

ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಮಹಾಸಭೆಯು ಇಂದು(ಸೆ.1) ಎಲಿಮಲೆಯ ಶ್ರೀ ಗೋಪಾಲಕೃಷ್ಣ ಗೌಡ ಕೇಪಳಕಜೆ ಸಭಾಭವನದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಸೊಸೈಟಿ ಅಧ್ಯಕ್ಷ ವಿಷ್ಣು ಭಟ್ ಮೂಲೆತೋಟ ವಹಿಸಿದ್ದರು.

2023-24ನೇ ಸಾಲಿನಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ವಿತರಿಸುವ ಬಗ್ಗೆ ಅಧ್ಯಕ್ಷರು ಘೋಷಿಸಿದರು.

ಇದೇ ಸಂದರ್ಭದಲ್ಲಿ ಸಿ.ಎಸ್.ಸಿ. ಸೇವಾ ಕೇಂದ್ರವನ್ನು ಸಾಹಿತಿ ಜಿ.ಎಸ್. ಉಬರಡ್ಕ ಉದ್ಘಾಟಿಸಿದರು.

ಬಳಿಕ 5 ಜನ ಹಿರಿಯ ಸದಸ್ಯರನ್ನು, ಎಸ್.ಎಸ್.ಎಲ್.ಸಿ., ಪಿಯುಸಿ ಪದವಿ ಹಾಗೂ ಉನ್ನತ ವ್ಯಾಸಂಗ ಮಾಡಿ‌ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

2023-24ನೇ ಸಾಲಿನಲ್ಲಿ ಮೃತಪಟ್ಟ ಸಂಘದ ಸದಸ್ಯರ ಮನೆಯವರಿಗೆ ಮರಣ ಸಾಂತ್ವಾನ ಚೆಕ್‌ ವಿತರಿಸಲಾಯಿತು. ಇತ್ತೀಚೆಗೆ ಅಪಘಾತದಲ್ಲಿ‌ ಮೃತಪಟ್ಟ ಪಿಗ್ಮಿ ಸಂಗ್ರಾಹಕ‌ ರಾಮಚಂದ್ರ ಪ್ರಭುಗಳ ಪುತ್ರ ಮರಣ ಸಾಂತ್ವನ ಮೊತ್ತವನ್ನು ಮರಳಿ ನಿಧಿಗೆ ನೀಡಿದರು.

ವೇದಿಕೆಯಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂತೋಷ್ ಎನ್., ಉಪಾಧ್ಯಕ್ಷರಾದ ಜಯಪ್ರಸಾದ್ ಸುಳ್ಳಿ, ನಿರ್ದೇಶಕರುಗಳಾದ ದೇವಿಪ್ರಸಾದ್ ಸುಳ್ಳಿ, ಶುಭಾಕರ ನಾಯಕ್ ಬೊಳ್ಳಾಜೆ, ಸತ್ಯೇಶ್ ಕುಮಾರ್ ಚಂದ್ರೋಡಿ, ಹರೀಶ್ ಸುಳ್ಳಿ, ಉಮೇಶ್ ಪ್ರಭು, ಹರೀಶ್ ಕಂಜಿಪಿಲಿ, ಶ್ರೀಮತಿ ಇಂದಿರಾ ಕೆ., ಶ್ರೀಮತಿ ಸಂಧ್ಯಾ ಕೆ.ಎಲ್., ಚಂದ್ರ ದಾಸನಕಜೆ, ಚೇತನ ಕೆ. ಉಪಸ್ಥಿತರಿದ್ದರು. ‌