ಮರ್ಕಂಜ : ನವೋದಯ ಸಂಘದ ವತಿಯಿಂದ ಚೈತನ್ಯ ವಿಮಯೋಜನೆಯ ಚೆಕ್ ಹಸ್ತಾಂತರ

0

ಮರ್ಕಂಜ ಗ್ರಾಮದ ಬೊಮ್ಮಾರು ದಿವ್ಯಾಜ್ಯೋತಿ ನವೋದಯ ಸ್ವ ಸಹಾಯ ಗುಂಪಿನ ಸದಸ್ಯೆ ಲಲಿತಾ ರವರು ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದು ಅವರಿಗೆ ನವೋದಯ ಚೈತನ್ಯ ವಿಮಯೋಜನೆ ಯಿಂದ ಮಂಜೂರಾದ ರೂಪಾಯಿ 1 ಲಕ್ಷದ ಚೆಕ್ ನ್ನು ಅವರ ವಾರಿಸುದಾರ ರಾದ ಬಾಬು ಮೂಲ್ಯ ರವರಿಗೆ ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ದೇಲಂಪಾಡಿ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷರಾದ ಲಿಂಗಪ್ಪ ನಾಯ್ಕ ತೋಟಚಾವಡಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನಯಕುಮಾರ್, ತಾಲೂಕು ನವೋದಯ ಮೇಲ್ವಿಚಾರಕರಾದ ಶ್ರೀಧರ ಮಾಣಿಮರ್ಧು, ಪ್ರೇರಕಿ ಅನಿತಾ, ಫಲಾನುಭವಿಯ ಪುತ್ರ ಅಖಿಲ್, ಸಹಕಾರಿ ಸಂಘದ ನಿರ್ದೇಶಕರು ಗುಂಪಿನ ಎಲ್ಲ ಸದಸ್ಯರು ಉಪಸ್ಥಿತರಿದ್ದರು.