ಸಂಪಾಜೆ ಸಹಕಾರಿ ಸಂಘದಿಂದ ಮರಣನಿಧಿ ಹಸ್ತಾಂತರ

0

ದ. ಕ. ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ , ಇತ್ತೀಚೆಗೆ ಮೃತಪಟ್ಟ ಲಿಂಗಪ್ಪ ಗೌಡ ಕೆ ಕೆ ರವರ ಮನೆಗೆ ಸಂಘದ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆಯವರು ತೆರಳಿ ಸಂಘದ ವತಿಯಿಂದ ನೀಡಲ್ಪಡುವ ಮರಣ ನಿಧಿ ರೂಪಾಯಿ ಹದಿನೈದು ಸಾವಿರವನ್ನು ಅವರ ಮನೆಯವರಿಗೆ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಗಣಪತಿ ಭಟ್ ಪಿ ಎನ್, ಆನಂದ ಪಿ ಎಲ್, ಯಮುನಾ ಬಿ ಎಸ್, ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ವೀರೇಂದ್ರ ಕುಮಾರ್ ಜೈನ್ ಮತ್ತು ಸಿಬ್ಬಂದಿಯಾದ ಧನಂಜಯ ಎಂ ಪಿ ರವರು ಹಾಜರಿದ್ದರು.