ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ದೇವಳದ ಶಾಶ್ವತ ಚಪ್ಪರಕ್ಕೆ 1.10 ಲಕ್ಷದ ದೇಣಿಗೆ ಹಸ್ತಾಂತರ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದ ಶಾಶ್ವತ ಚಪ್ಪರಕ್ಕೆ ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ದೇಣಿಗೆ ರೂ.1.10 ಲಕ್ಷ ಕೊಡುಗೆಯಾಗಿ ವಿತರಿಸಲಾಯಿತು.

ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ ರವರಿಗೆ ಸಂಘದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಯವರು ಚೆಕ್ ನ್ನು ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ ಆಲೆಟ್ಟಿ, ನಿರ್ದೇಶಕರಾದ ಶ್ರೀಪತಿ ಭಟ್ ಮಜಿಗುಂಡಿ, ಜಯಪ್ರಕಾಶ್ ಕುಂಚಡ್ಕ,ಹರೀಶ್ ಕೆ.ಜೆ, ತಂಗವೇಲು ನಾಗಪಟ್ಟಣ, ವೇದಾವತಿ ಸಣ್ಣಯ್ಯ ಆಲೆಟ್ಟಿ,ಎನ್.ಎ.ಗಂಗಾಧರ ,ಸಿ.ಇ.ಒ ದಿನಕರ ಆಲೆಟ್ಟಿ, ಸಿಬ್ಬಂದಿ ಗಳಾದ ಪ್ರವೀಣ್ ಆಲೆಟ್ಟಿ, ಶಕುಂತಲಾ, ಬಿಪಿನ್ ಕಲ್ಲೆಂಬಿ, ಯೋಗೀಶ್ ಜಯನಗರ, ಪದ್ಮಿನಿ ರಾಜೇಶ್ ಮತ್ತಿತರರು ಉಪಸ್ಥಿತರಿದ್ದರು.