ನಾನು ಕೂಡಾ ಮಾಧ್ಯಮದಿಂದಲೇ ರಾಜಕೀಯಕ್ಕೆ ಬಂದವ

0

ನಾನು ಕೂಡಾ ಮಾಧ್ಯಮದಿಂದಲೇ ರಾಜಕೀಯಕ್ಕೆ ಬಂದು ಎರಡು ಬಾರಿ ಸಂಸದನಾದವನು. ನನಗೆ ಟಿಕೆಟ್ ಕೈತಪ್ಪಿದೆ ಎನ್ನುವುದು ಬಿಟ್ಟರೆ ನಾನು ಜನರಿಂದ ಯಾವತ್ತೂ ತಿರಸ್ಕೃತಗೊಂಡವನಲ್ಲ. ಯಾಕೆಂದರೆ ನಾನು ಮಾಧ್ಯಮದಿಂದ ಬಂದಿರುವುದರಿಂದ ನನ್ನೊಳಗಿನ ಪತ್ರಕರ್ತ ನನ್ನೊಳಗಿನ ರಾಜಕಾರಣಿಯನ್ನು ಯಾವತ್ತೂ ರಿವ್ಯೂ ಮಾಡುತ್ತೇನೆ. ಸುದ್ದಿ ಪತ್ರಿಕೆಯಿಂದ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡುವಂತದ್ದು, ಶ್ಲಾಘನೀಯ ಕೆಲಸವಾಗಿದೆ ಎಂದು ಬಿಜೆಪಿ ನಾಯಕ ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಹೇಳಿದರು.

ಸೆ.4ರಂದು ಸುಳ್ಯಕ್ಕೆ ಆಗಮಿಸಿದ್ದ ಅವರು ಸುದ್ದಿ ಜನಾಂದೋಲನ ವೇದಿಕೆ ವತಿಯಿಂದ ನಡೆಸುತ್ತಿರುವ ಭ್ರಷ್ಟಾಚಾರ ವಿರುದ್ಧದ ಆಂದೋಲನದ ಫಲಕ ಸ್ವೀಕರಿಸಿ, ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಜನರ ಪರವಾಗಿ ನಾನು ಯಾವತ್ತೂ ಕೂಡ ಧ್ವನಿ ಎತ್ತಿ ಕೆಲಸ ಮಾಡುತ್ತಿದೆ. ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕರು ಹಾಗೂ ಎಲ್ಲಾ ಸಿಬ್ಬಂದಿಗಳು ಕೈಗೆತ್ತಿಕೊಂಡ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಯಶಸ್ವಿ ಸಿಗಲಿ. ಈ ಮೂಲಕ ಸುದ್ದಿ ಮಾಧ್ಯಮಕ್ಕೆ ಜನರ ವಿಶ್ವಾಸ ಹಾಗೂ ಮನ್ನಣೆ ದೊರೆಯಲಿ ಎಂದು ಹೇಳಿದರಲ್ಲದೇ, ಎಲ್ಲಾ ಪತ್ರಿಕೆ ಹಾಗೂ ಮಾಧ್ಯಮಗಳು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮೇಲ್ಪಂಕ್ತಿಯಾಗಿಟ್ಟುಕೊಂಡು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.