ಮಳೆ ಬಂದಾಗ ತೋಡಾಗುತ್ತಿರುವ ಜಯನಗರ ರಸ್ತೆ

0

ಹೊಂಡ ಗುಂಡಿಗಳಿಂದ ಬಿದ್ದೇಳುತ್ತಿರುವ ವಾಹನ ಸವಾರರು

ಸುಳ್ಯ ನಗರದ ಜಯನಗರ ವಾರ್ಡ್ ಮುಖ್ಯ ರಸ್ತೆ ಮಳೆ ಬಂದಾಗ ತೋಡಾಗಿ ಮಾರ್ಪಡಾಗುತ್ತಿದೆ.
ರಸ್ತೆಯ ನಡು ನಡುವೆ ಭಾರಿ ಹೊಂಡ ಗುಂಡಿಗಳು ನಿರ್ಮಾಣವಾಗಿ ಈ ರಸ್ತೆಯಲ್ಲಿ ಸಂಚರಿಸುವ ಅನೇಕ ಮಂದಿ ದ್ವಿ ಚಕ್ರ ವಾಹನ ಸಾವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ಸಂಭವಿಸುತ್ತಿದೆ.


ಹೊಸಗದ್ದೆ ಬಳಿಯಿಂದ ಜಯನಗರ ಶಾಲೆಯ ವರೆಗೆ ಬಹುತೇಕ ಕಡೆಗಳಲ್ಲಿ ಈ ಪರಿಸ್ಥಿತಿ ಉಂಟಾಗಿದೆ.
ಪ್ರತಿದಿನ ಈ ರಸ್ತೆಯಲ್ಲಿ ನೂರಾರು ವಾಹನಗಳು, ಶಾಲಾ ಬಸ್ಸುಗಳು ಸಂಚರಿಸುತ್ತಿದ್ದು ಚಾಲಕರಿಗೆ ಚಾಲನೆ ವೇಳೆ ಈ ಗುಂಡಿಗಳನ್ನು ತಪ್ಪಿಸಿ ಹೋಗುವುದೇ ಒಂದು ಗೋಳಾಗಿದೆ.


ಸಂಬಂಧ ಪಟ್ಟ ಅಧಿಕಾರಿಗಳು, ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.