ಪಂಜ ದೇವಳದ ಕದಿರು ಗದ್ದೆಯಲ್ಲಿ ಕದಿರು ಪೂಜೆ

0

ಸೆ.7:ಗಣಹವನ ,ಸಾಮೂಹಿಕ ಅಪ್ಪಕಜ್ಜಾಯ ಸೇವೆ, ಕದಿರು ವಿತರಣೆ

ಪಂಜ ಸೀಮೆಯ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಕದಿರು ಗದ್ದೆಯಲ್ಲಿ ಸೆ.6 ರಂದು ಕದಿರು ಪೂಜೆ ನಡೆದು ಕದಿರು ತೆಗೆಯಲಾಯಿತು. ಸೆ.7ರಂದು ಗಣಹವನ, ಸಾಮೂಹಿಕ ಅಪ್ಪಕಜ್ಜಾಯ ಸೇವೆ, ಕದಿರು ವಿತರಣೆ ಜರುಗಲಿದೆ.

ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ,ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಮಾಲಿನಿ ಕುದ್ವ, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ರಜಿತ್ ಭಟ್ ಪಂಜಬೀಡು,ಪಂಜ ಪರಿಸರದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಕೇಶವ ಕುದ್ವ, , ಕುಸುಮಾಧರ ಕಕ್ಯಾನ, ವಸಂತ ಅಳ್ಪೆ ಕೋಡಿ ಉಪಸ್ಥಿತರಿದ್ದರು.
ದೇಗುಲದ ಅರ್ಚಕ ನರೇಶ್
ಕೃಷ್ಣರವರು ಪೂಜೆ ನೆರವೇರಿಸಿದರು.

ಸೆ.7 ರಂದು ಗಣೇಶ ಚತುರ್ಥಿಯಂದು ಬೆಳಿಗ್ಗೆ 7 ಗಂಟೆಗೆ ದೇಗುಲದ ಕದಿರು ಗದ್ದೆಯಿಂದ ತೆನೆಯನ್ನು ದೇಗುಲಕ್ಕೆ ಚೆಂಡೆ,ವಾದ್ಯ ಶಂಖ ನಾದದೊಂದಿಗೆ ತಂದು ದೇಗುಲಕ್ಕೆ ಹಾಗೂ ದೇಗುಲದ ದೈವಸ್ಥಾನಗಳಿಗೆ ಕದಿರು ಕಟ್ಟಿ ಬೆಳಿಗ್ಗಿನ ಪೂಜೆ ಬಳಿಕ ಭಕ್ತರಿಗೆ ಕದಿರು ವಿತರಣೆ ಜರುಗಲಿದೆ.