ಕುಂಬ್ರ ರಘುನಾಥ ರೈಯವರಿಗೆ ಬೆಂಗಳೂರಿನ ಬಂಟರ ಸಂಘದ ಶ್ರದ್ಧಾಂಜಲಿ ಕಾರ್ಯಕ್ರಮ

0

ಆ. 26ರಂದು ಬೆಂಗಳೂರಿನಲ್ಲಿ ನಿಧನರಾದ ಬಾಳಿಲ ಗ್ರಾಮದ ದೋಳ್ತೋಡಿ ದಿ. ಸುಬ್ಬಯ್ಯ ರೈಯವರ ಪುತ್ರ ಚಲನಚಿತ್ರ ನಿರ್ಮಾಪಕ ರಘುನಾಥ ರೈ ಕುಂಬ್ರರವರಿಗೆ ಬೆಂಗಳೂರಿನ ಬಂಟರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಸೆ. 4ರಂದು ಬೆಂಗಳೂರಿನ ಬಂಟರ ಭವನದಲ್ಲಿ ನಡೆಯಿತು.


ಬಂಟರ ಸಂಘದ ಮಾಜಿ ಅಧ್ಯಕ್ಷ ಚಂದ್ರಹಾಸ ರೈ ಪ್ರಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ರಘುನಾಥ ರೈಯವರ ನಿಕಟವರ್ತಿಗಳು, ಬಂಟರ ಸಂಘದ ಪದಾಧಿಕಾರಿಗಳು ಮೃತರಿಗೆ ನುಡಿನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ಬಂಟರ ಸಂಘದ ಪದಾಧಿಕಾರಿಗಳು, ಸದಸ್ಯರು, ಕುಂಬ್ರ ರಘುನಾಥ ರೈಯವರ ಪುತ್ರ ಅನೂಪ್ ರೈ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದು, ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.