ಪುರುಷೋತ್ತಮ ದೇರಾಜೆಯವರ ಯೋಗ ತರಬೇತಿ ಕೇಂದ್ರದಲ್ಲಿ ಅಂತರ್ ತರಗತಿ ಯೋಗ ಚಾಂಪಿಯನ್ ಶಿಪ್

0

ಸುಮಾರು ವರುಷಗಳಿಂದ ಬೆಂಗಳೂರಿನಲ್ಲಿ ಯೋಗ ತರಬೇತಿ ನೀಡುತ್ತಿರುವ ಪುರುಷೋತ್ತಮ ದೇರಾಜೆಯವರ
ಸರಸ್ವತಿ ಯೋಗ ಕೇಂದ್ರ ಬೆಂಗಳೂರು ಇದರ 4ನೇ ವರುಷದ ಅಂತರ್ ತರಗತಿ ಯೋಗ ಚಾಂಪಿಯನ್ ಶಿಪ್ ಇತ್ತೀಚೆಗೆ ನಡೆಯಿತು.

ದಯಾನಂದ ರೆಡ್ಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸುಮಾರು 150 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದರು. ಈ‌ ಸಂದರ್ಭದಲ್ಲಿ ಯೋಗ ಅಧ್ಯಾಪಕರಾದ ಪುರುಷೋತ್ತಮ ದೇರಾಜೆಯವರ ತಾಯಿ ಸರಸ್ವತಿ ದೇರಾಜೆ ಹಾಗೂ ದೊಡ್ಡಮ್ಮ ಸುಶೀಲ ಪಾಲೆಪ್ಪಾಡಿಯವರನ್ನು ಸನ್ಮಾನಿಸಲಾಯಿತು.

ಕೊಳಲು ವಾದಕ ಗಣೇಶ್ ಸುಳ್ಯ ಇವರು ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸ್ಪರ್ದೆಯಲ್ಲಿ ದೈವಿಕ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ ಆರಾದ್ಯ ದೇರಾಜೆ ಲಿಟ್ಟಲ್ ಚಾಂಪಿಯನ್ ಆಗಿ‌ ಹೊರಹೊಮ್ಮಿದರು.

ಸುಶ್ಮಿತ ಕಡಪಳ ಕಾರ್ಯಕ್ರಮ ನಿರೂಪಿಸಿದರು.