ಸುಳ್ಯ ಠಾಣೆಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಗಣ ಹೋಮ ಪೂಜೆ

0

ಸುಳ್ಯ ಪೊಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಗಣ ಹೋಮ ಪೂಜಾ ಕಾರ್ಯಕ್ರಮ ಸೆ‌.7ರಂದು ಬೆಳಿಗ್ಗೆ ನಡೆಯಿತು.

ಪೂಜಾ ಕಾರ್ಯಕ್ರಮವನ್ನು ಪುರೋಹಿತ ಬ್ರಹ್ಮಶ್ರೀ ನಾಗರಾಜ್ ಭಟ್ ಹಳೆಗೇಟು ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಸಂತೋಷ್, ಅಪರಾಧ ತನಿಖಾ ವಿಭಾಗದ ಎಸ್ಐ ಶ್ರೀಮತಿ ಸರಸ್ವತಿ ಹಾಗೂ ಠಾಣಾ ಎ ಎಸ್ ಐ ಗಳು ಉಪಸ್ಥಿತರಿದ್ದರು.
ಪೂಜಾ ಕಾರ್ಯಕ್ರಮದಲ್ಲಿ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಅವರ ಕುಟುಂಬಸ್ಥರು ಭಾಗವಹಿಸಿದ್ದರು.
ಬಳಿಕ ಪ್ರಸಾದ ವಿತರಣೆ ಜರುಗಿತು.