ಐವರ್ನಾಡು: ಪಾಲೆಪ್ಪಾಡಿಯಲ್ಲಿ 32 ನೇ ವರ್ಷದ ಗಣೇಶೋತ್ಸವ ಆರಂಭ

0

ಮಂಜುಶ್ರೀ ಗೆಳೆಯರ ಬಳಗ ಪಾಲೆಪ್ಪಾಡಿ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪಾಲೆಪ್ಪಾಡಿ ವತಿಯಿಂದ 32 ನೇ ವರ್ಷದ ಶ್ರೀ ಗಣೇಶ ಚತುರ್ಥಿ ಆಚರಣೆ ಸೆ.07 ರಂದು ಪಾಲೆಪ್ಪಾಡಿ ಕ್ರೀಡಾಂಗಣ ದರ್ಖಾಸ್ತುವಿನಲ್ಲಿ ಪ್ರಾರಂಭಗೊಂಡಿತು.


ಬೆಳಿಗ್ಗೆ ಗಣಪತಿ ಹವನ ಹಾಗೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಿತು.ಬಳಿಕ ಭಜನಾ ಕಾರ್ಯಕ್ರಮ ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.


ಕೆ.ವಿ.ಜಿ ಡೆಂಟಲ್ ಕಾಲೇಜು ಅಸಿಸ್ಟೆಂಟ್ ಪ್ರೊಫೆಸರ್ ಡಾ.ಸಂದೀಪ್ ಬಿ.ಎಸ್.ರವರನ್ನು ಸನ್ಮಾನಿಸಲಾಗುವುದು.
ಎಸ್.ಎಸ್.ಎಲ್.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸೋಹನ್ ಎಂ.ಎಸ್, ಅಥ್ಲೆಟಿಕ್ ಹರ್ಡಲ್ಸ್ ನಲ್ಲಿ ರಾಜ್ಯ ಮಟ್ಟದಲ್ಲಿ 4 ನೇ ಸ್ಥಾನ ಪಡೆದ ಕ್ರೀಡಾಪಟು ಕು.ಹರ್ಷಪ್ರಿಯ ಸಿ.ಕೂಪ್ ರವರನ್ನು ಗೌರವಿಸಲಾಗುವುದು.


ಸಂಜೆ ಗಂಟೆ 4.00 ರಿಂದ ಶ್ರೀ ಗಣೇಶನ ವೈಭವದ ಶೋಭಾಯಾತ್ರೆಯು ಪಾಲೆಪ್ಪಾಡಿಯಿಂದ ಹೊರಟು ಬಾಂಜಿಕೋಡಿ ಹೊಳೆಯಲ್ಲಿ ಜಲಸ್ತಂಭನ ಮಾಡಲಾಗುವುದು.