ಬೊಳುಬೈಲು: ಬಿಜೆಪಿ ಬೂತ್ ಸಮಿತಿ ರಚನೆ

0

ಜಾಲ್ಸೂರು ಗ್ರಾಮದ ಬೊಳುಬೈಲು ಬಿಜೆಪಿ ಬೂತಿನ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಿವಪ್ರಸಾದ್ ರೈ ಪಿಲಿಕೋಡಿ, ಕಾರ್ಯದರ್ಶಿಯಾಗಿ ಕೆ.ಟಿ ಚಿತ್ತರಂಜನ್ ಬೊಳುಬೈಲು ಆಯ್ಕೆಯಾದರು. ಜೊತೆಗೆ ಮೀಸಲಾತಿ ಆಧಾರದಲ್ಲಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಬಿಜೆಪಿ ಪ್ರಮುಖರಾದ ಗೋಪಾಲಕೃಷ್ಣ ಭಟ್ ಹಾಗೂ ಹೇಮಂತ್ ಮಠ ಅವರು ಸಮಿತಿಯನ್ನು ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಕನಕಮಜಲು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ಕರುಣಾಕರ ರೈ ಕುಕ್ಕಂದೂರು, ಜಾಲ್ಸೂರು ಗ್ರಾ.ಪಂ. ಮಾಜಿ ಸದಸ್ಯ ಕೆ.ಪಿ. ಭುವನೇಂದ್ರ ಬೊಳುಬೈಲು, ವೆಂಕಟೇಶ್ ನಡುಬೆಟ್ಟು, ಪದ್ಮನಾಭ ನೆಕ್ರಾಜೆ, ಸುಭಾಷ್ ರೈ ಕುಕ್ಕಂದೂರು, ನವೀನ್ ಆರ್ತಾಜೆ ಹಾಗೂ ಇತರರು ಉಪಸ್ಥಿತರಿದ್ದರು.