ಆಲೆಟ್ಟಿ ತುದಿಯಡ್ಕ ಭಾಗದಲ್ಲಿ ಕಾಡಾನೆಗಳ ಹಾವಳಿ- ಕೃಷಿ ತೋಟಕ್ಕೆ ಹಾನಿ

0

ಆಲೆಟ್ಟಿ ಭಾಗದ ತುದಿಯಡ್ಕ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈ ಭಾಗದ ಕೃಷಿಕರ ತೋಟಕ್ಕೆ ನುಗ್ಗಿ ಹಾನಿ ಮಾಡಿವೆ. ಕೃಪಾಶಂಕರ ತುದಿಯಡ್ಕ, ಕುಮಾರಸ್ವಾಮಿ ಬಿಸಿಲುಮಲೆ, ಕಳಗಿ ರಾಮಯ್ಯ ಹಾಗೂ ಲೋಲಜಾಕ್ಷ ರವರ ತೋಟಕ್ಕೆ ಕಳೆದ ರಾತ್ರಿ ಸಮಯದಲ್ಲಿ ಕಾಡಾನೆಗಳ ಹಿಂಡು ಧಾಳಿ ಮಾಡಿದ್ದು ಸಿಕ್ಕ ವಸ್ತುಗಳನ್ನು ಪುಡಿಮಾಡಿರುವುದಲ್ಲದೆ ಅಡಿಕೆ,ತೆಂಗು,ಬಾಳೆಗಿಡಗಳನ್ನು ನಾಶ ಪಡಿಸಿರುವುದಾಗಿ ತಿಳಿದು ಬಂದಿದೆ.