ಕೊಡಗು ಸಂಪಾಜೆ ಶ್ರೀ ಪಂಚಲಿಂಗೇಶ್ವರ ದೇಗುಲಕ್ಕೆ ಸಂಸದ ಯದುವೀರ್ ಒಡೆಯರ್ ಭೇಟಿ

0

ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಸಂಸದರ ನಿಧಿಯಿಂದ ಅನುದಾನಕ್ಕೆ ಮನವಿ

ಮೈಸೂರು – ಕೊಡಗು ಲೋಕಸಭಾ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಪಾಜೆಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಸೆ.10ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು.

ದೇವಸ್ಥಾನದ ಗೌರವಾಧ್ಯಕ್ಷ ಡಾ. ರಾಜಾರಾಮ ಕೀಲಾರು ಹಾಗೂ ಮೊಕ್ತೇಸರ ಎಂ ಬಿ ಸದಾಶಿವ ಅವರು ಸ್ವಾಗತಿಸಿ ಬರಮಾಡಿಕೊಂಡರು.

ದೇವಸ್ಥಾನದ ಜೀರ್ಣೋದ್ಧಾರದ ಬಗ್ಗೆ ಮನದಟ್ಟು ಮಾಡಿ ಸಂಸದರ ನಿಧಿಯಿಂದ ಅನುದಾನ ಒದಗಿಸಿ ಕೊಡುವ ಬಗ್ಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ, ಇಂದಿರಾ ದೇವಿಪ್ರಸಾದ್, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಜಯಕುಮಾರ್ ಚೆದ್ಕಾರ್ , ಕಾರ್ಯದರ್ಶಿ ಕೇಶವ ಚೌಟಾಜೆ, ಕೆ ಜಿ ಗೋಪಾಲಕೃಷ್ಣ ಭಟ್, ಬಿ. ಆರ್. ಪದ್ಮಯ್ಯ, ಕೊಂದಲಕಾಡು ನಾರಾಯಣ ಭಟ್, ಮುರಳೀಧರ್ ಭಟ್,ರಾಮಕೃಷ್ಣ ಕುಕ್ಕಂದೂರು ,
ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎನ್. ಸಿ. ಅನಂತ್ ಊರುಬೈಲು, ಪ್ರಧಾನ ಕಾರ್ಯದರ್ಶಿಗಳಾದ ರಾಜಾರಾಮ ಕಳಗಿ,ಕಾರ್ಯದರ್ಶಿ ಲೋಹಿತ್ ಹೊದ್ದೆಟ್ಟಿ,ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.