ಐವತ್ತೊಕ್ಲು ಭಾ.ಜ.ಪಾ 1ನೇ ಬೂತ್ ಸಮಿತಿ ಕಾರ್ಯಕರ್ತರ ಮತ್ತು ರಸ್ತೆ ಫಲಾನುಭವಿಗಳ ಸಭೆ

0

ಐವತ್ತೊಕ್ಲು ಭಾ.ಜ.ಪಾ1ನೇ ಬೂತ್ ಸಮಿತಿಯ ಕಾರ್ಯಕರ್ತರ ಮತ್ತು ರಸ್ತೆ ಫಲಾನುಭವಿಗಳ ಸಭೆಯು ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಪುರಿಯ ರವರ ಮನೆಯಲ್ಲಿ ಸೆ.10 ರಂದು ನಡೆಯಿತು.

ನಿಡ್ವಾಳ, ಕಂಬಳ ,ಪಾಂಡಿಗದ್ದೆ, ಪೊಳೆಂಜ ಸಂಪರ್ಕ ರಸ್ತೆ ಅಭಿವೃದ್ದಿ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಲಾಯಿತು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಭಾ.ಜ.ಪಾ ಸದಸ್ಯತ್ವವನ್ನು ಮಾಡುವಂತೆ ತಿಳಿಸಲಾಯಿತು.
ಐವತ್ತೊಕ್ಲು 1 ನೇ ವಾರ್ಡ್ ಬೂತ್ ಅಧ್ಯಕ್ಷ ದಯಾನಂದ ಮೇಲ್ಮನೆ ಸಭಾಧ್ಯಕ್ಷತೆ ವಹಿಸಿದ್ದರು.

ಶಾಸಕಿ ಕು.ಭಾಗೀರಥಿ ಮುರುಳ್ಯ, ಭಾ.ಜ.ಪಾ ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ, ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ ಸೇರಿದಂತೆ ಪ್ರಮುಖರಾದ ಡಾ.ರಾಮಯ್ಯ ಭಟ್,ಕಾರ್ಯಪ್ಪ ಗೌಡ ಚಿದ್ಗಲ್, ಶಿವರಾಮಯ್ಯ ಕರ್ಮಜೆ,ಲಿಗೋಧರ ಆಚಾರ್ಯ ನಾಯರ್ ಕೆರೆ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ನಾರಾಯಣ ಕೃಷ್ಣನಗರ, ಐವತ್ತೊಕ್ಲು ಶಕ್ತಿ ಕೇಂದ್ರದ ಪ್ರಮುಖ್ ಲೋಕೇಶ್ ಬರೆಮೇಲು, 150ಕ್ಕೂ ಹೆಚ್ಚು ಭಾ.ಜ.ಪಾ ಕಾರ್ಯಕರ್ತರು , ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.