ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗದಿಂದ ವಸಂತ ರತ್ನ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಗೆ ಭೇಟಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗದ ಸದಸ್ಯರು ಎಣ್ಮೂರಿನ ವಸಂತ ರತ್ನ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆಗೆ ಸೆ. 12ರಂದು ಭೇಟಿ ನೀಡಿದರು. ಕ್ಲಬ್‌ನ ಸ್ಥಾಪಕ ಅಧ್ಯಕ್ಷರಾದ ವಿಠಲ್ ಶೆಟ್ಟಿ ಮತ್ತು ಶ್ರೀಮತಿ ಭವಾನಿ ವಿ. ಶೆಟ್ಟಿ ದಂಪತಿಯ ಮಗನ ಹುಟ್ಟುಹಬ್ಬದ ಪ್ರಯುಕ್ತ ಭಿನ್ನ ಸಾಮರ್ಥ್ಯದ ಮಕ್ಕಳ ಜೊತೆ ಕೇಕ್ ಕತ್ತರಿಸಲಾಯಿತು. ಬಳಿಕ ಮಕ್ಕಳಿಗೆ ಸಹಾಯಾರ್ಥವಾಗಿ ಆರ್ಥಿಕ ಧನ ಸಹಾಯ ಮತ್ತು ಅಕ್ಕಿಯನ್ನು ವಸತಿ ನಿಲಯದ ಪದಾಧಿಕಾರಿಗಳಿಗೆ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಉಷಾ ಬಿ. ಭಟ್ ನೀಡಿದರು. ನಂತರ ಭಿನ್ನ ಸಾಮರ್ಥ್ಯದ ಮಕ್ಕಳೊಂದಿಗೆ ಸೇರಿ ಸಹ ಭೋಜನವನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಸಂತ ರತ್ನ ಭಿನ್ನಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆಯ ಆಡಳಿತಾಧಿಕಾರಿ ಬಾಲಸುಬ್ರಹ್ಮಣ್ಯ, ಖಜಾಂಜಿ ಸಂಪ್ರೀತ್ ಮಿತ್ತಮೂಲೆ, ಮಹೇಶ್ ಮೊಂಟಡ್ಕ,
ಸವಿತ ಮೊಂಟಡ್ಕ, ನವೀನ್ ತೋಟ, ವಿಶೇಷ ಶಿಕ್ಷಕಿ ಸುಜಾತ ಮಡಪ್ಪಾಡಿ,
ಕರಕುಶಲ ತರಬೇತುದಾರ
ಶಿಲ್ಪ, ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಉಷಾ ಬಿ. ಭಟ್, ನಿಕಟಪೂರ್ವಾಧ್ಯಕ್ಷ ವಿಠಲ್ ಶೆಟ್ಟಿ, ಸದಸ್ಯರಾದ ಭವಾನಿ ವಿ. ಶೆಟ್ಟಿ ಆಶಾ ಸಿ. ರೈ ಕೋಶಾಧಿಕಾರಿ ಈಶ್ವರ ವಾರಣಾಶಿ, ಹೊನ್ನಪ್ಪ ಬೆಳ್ಳಾರೆ ಹಾಗೂ ಯತೀಶ್ ಭಂಡಾರಿ ಉಪಸ್ಥಿತರಿದ್ದರು.