ಪಂಜ ದೇವಸ್ಥಾನದ ವಠಾರದಲ್ಲಿ:ಶ್ರೀ ಕ್ಷೇ.ಧ.ಗ್ರಾ. ಯೋಜನೆ ವತಿಯಿಂದ ಗಿಡ ನಾಟಿ ಕಾರ್ಯಕ್ರಮ.

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ( ರಿ) ಬಿ ಸಿ ಟ್ರಸ್ಟ್, ಪಂಜ ವಲಯ,ಸಾಮಾಜಿಕ ಅರಣಿಕರಣ ಕಾರ್ಯಕ್ರಮದಡಿಯಲ್ಲಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಯಿತು.


ಪಂಜ ವಿಪತ್ತು ಘಟಕ ಹಾಗೂ ಕೂತ್ಕುಂಜ ಒಕ್ಕೂಟದ ವತಿಯಿಂದ ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್ ರವರು ಗಿಡ ನೀಡುವುದರ ಮುಖಾಂತರ ಚಾಲನೆ ನೀಡಿದರು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಪವಿತ್ರ ಕುದ್ವ,ತಾಲ್ಲೂಕು ಜನಜಾಗೃತಿ ವೇದಿಕೆ ಸದಸ್ಯ ಮೋನಪ್ಪ ಗೌಡ ಬೊಳ್ಳಾಜೆ,
ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ನಳಿನಿ, ಸುಳ್ಯ ತಾಲ್ಲೂಕು ಯೋಜನಾಧಿಕಾರಿ ಮಾಧವ ಗೌಡ, ತಾಲ್ಲೂಕು ಕೃಷಿ ಅಧಿಕಾರಿ ರಮೇಶ್,ಘಟಕ ಪ್ರತಿನಿಧಿ ವಿಶ್ವನಾಥ ಸಂಪ, ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಸೇವಾಪ್ರತಿನಿಧಿ ಕವಿತಾ, ಮೇಲ್ವಿಚಾರಕಕಿ ಕಲಾವತಿ ಒಕ್ಕೂಟದ ಪದಾಧಿಕಾರಿಗಳು,ಸಂಘದ ಸದಸ್ಯರು ಉಪಸ್ಥಿತರಿದ್ದರು.