ಬೆಳ್ಳಾರೆ ಶ್ರೀ ಬಾಲಾಜಿ ಫ್ಯಾಶನ್ ಶುಭಾರಂಭ

0

ಬೆಳ್ಳಾರೆಯ ಕಲ್ಪವೃಕ್ಷ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀ ಬಾಲಾಜಿ ಫ್ಯಾಶನ್ ಸೆ. 16ರಂದು ಶುಭಾರಂಭಗೊಂಡಿತು.

ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್ ದೀಪ ಪೃಜ್ವಲಿಸಿ ಸಂಸ್ಥೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಬೆಳ್ಳಾರೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯ.ಸ. ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಭಾಗವಹಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕರರಾದ ಲಾದೂರಾಮ್ ಪಟೇಲ್ ಸ್ವಾಗತಿಸಿದರು. ಸುಖಾರಾಮ್ ಪಟೇಲ್ ವಂದಿಸಿದರು. ದಿನೇಶ್ ಪಟೇಲ್, ರಾಕೇಶ್, ರಮೇಶ್, ಕೈಲಾಸ್, ಭರತ್, ಶ್ರವಣ್, ಸುರೇಶ್, ಲಂಬೂರಾಮ್, ಹರೀಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನೂತನ ವಸ್ತ್ರ ಮಳಿಗೆಯಲ್ಲಿ ಬೇರೆ ಬೇರೆ ಕಂಪನಿಗಳ ವಿವಿಧ ವಿನ್ಯಾಸದ ಪುರುಷರ, ಮಹಿಳೆಯರ ಮತ್ತು ಮಕ್ಕಳ ಬಟ್ಟೆಗಳು ದೊರೆಯಲಿದೆ.