ಗಾಂಧಿನಗರ :ಈದ್ ಮಿಲಾದ್ ಅಂಗವಾಗಿ ಅಲ್ ಹಿಕ್ವಾನ್ ಖಬರ್ ಸೇವಾ ಸಮಿತಿ ವತಿಯಿಂದ ತಂಪು ಪಾನಿಯ ಮತ್ತು ಒಂದು ದಿನದ ಭೋಜನ ವಿತರಣೆ

0

ಗಾಂಧಿನಗರ ಎಂ ಜೆ ಎಂ ಅಲ್ ಹಿಕ್ವಾನ್ ಖಬರ್ ಸೇವಾ ಸಮಿತಿ ವತಿಯಿಂದ ಕೇಂದ್ರ ಮಸೀದಿಯಲ್ಲಿ ನಡೆದ ಈದ್ ಮಿಲಾದ್ ಕಾರ್ಯಕ್ರಮದಲ್ಲಿ ತಂಪು ಪಾನಿಯ ವಿತರಣೆ ಹಾಗೂ ಸೆ. 15 ರಂದಿನ ಒಂದು ದಿನದ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.

ನೂರಾರು ಮಂದಿ ವಿದ್ಯಾರ್ಥಿಗಳು ಸ್ಥಳೀಯ ಜಮಾಅತರು ಇದರ ಸದುಪಯೋಗವನ್ನು ಪಡೆದುಕೊಂಡರು.

ಅಲ್ ಹಿಕ್ವಾನ್ ಸಮಿತಿಯು ಗಾಂಧಿನಗರ ಜಮಾಅತ್ತಿನ ಮಸೀದಿಯ ಖಬರ್ ಸ್ಥಾನದ ಸೇವೆಯನ್ನು ಮಾಡುತ್ತಾ ಬರುತ್ತಿದ್ದೆ.

ಅಧ್ಯಕ್ಷ ಹನೀಫ್ ರವರ ನೇತೃತ್ವದಲ್ಲಿ ಸರ್ವ ಸದಸ್ಯರುಗಳು ಮಸೀದಿಯ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದೆ.