ಬೆಳ್ಳಾರೆ ಕೆ.ಪಿ.ಎಸ್. ಪ.ಪೂ ವಿಭಾಗದ ಪೋಷಕರ ಸಭೆ

0

ಪದವಿ ಪೂರ್ವ ಶಿಕ್ಷಣ ಇಲಾಖೆಯ ಸುತ್ತೋಲೆಯಂತೆ ಕೆ.ಪಿ.ಎಸ್ ಬೆಳ್ಳಾರೆ ಪ.ಪೂ. ವಿಭಾಗದ ಪ್ರಥಮ ಪೋಷಕರ ಸಭೆ ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಡಿ.ಎಂ.ಸಿ ಉಪಾಧ್ಯಕ್ಷರಾದ ಶ್ರೀನಾಥ್ ರೈ ಬಾಳಿಲ ರವರು ವಹಿಸಿದ್ದು , ಪೋಷಕ ಪ್ರತಿನಿಧಿಗಳಾದ ಶ್ರೀಮತಿ ಲೋಲಾಕ್ಷಿ ಹಾಗೂ ಶ್ರೀಮತಿ ಸವಿತಾ ಡಿಸೋಜಾರವರು ಪೋಷಕರಿಗೆ ಶುಭವನ್ನು ಹಾರೈಸಿದರು.

ಪ್ರಾಂಶುಪಾಲರಾದ ಜನಾರ್ಧನ ಕೆ. ಎನ್ ರವರು ಪ್ರಾಸ್ತಾವಿಕವಾಗಿ ಮಾತನ್ನಾಡುತ್ತಾ, ಶೈಕ್ಷಣಿಕ ವರ್ಷದಲ್ಲಿ ನಡೆದ ಪ್ರಥಮ ಕಿರುಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ನಿರ್ವಹಣೆ, ಹಾಜರಾತಿ ಕೊರತೆ ಹಾಗೂ ಇಲಾಖಾ ಮಾಹಿತಿಗಳ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ನೀಡಿದರು. ತರಗತಿ ಉಪನ್ಯಾಸಕಿಯರಾದ ಶ್ರೀಮತಿ ಪ್ರಮೀಳಾ, ದೀಪಿಕಾ ಹಾಗೂ ಸುಪ್ರಿಯಾ ರವರು ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಉಪನ್ಯಾಸಕಿಯಾದ ಪರಿಮಳ ರಾವ್ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶ್ರೀಮತಿ ದೇವಿಕಲಾ ರವರು ಸ್ವಾಗತಿಸಿ, ರೇಣುಕಾ ರವರು ವಂದಿಸಿದರು. ಸಭೆಯಲ್ಲಿ ಗರಿಷ್ಠ ಸಂಖ್ಯೆಯ ಪೋಷಕರು ಹಾಜರಿದ್ದು, ತಮ್ಮ ಮಕ್ಕಳ ಪ್ರಗತಿ ಬಗ್ಗೆ ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿದರು.