ಸುಣ್ಣಮೂಲೆ: ಅನುಮಾನದಿಂದ ಬೈಕ್ ಸವಾರನನ್ನು ಅಡ್ಡಗಟ್ಟಿ ಹಿಡಿದ ಸ್ಥಳೀಯರು

0

ವಿಚಾರಣೆ ವೇಳೆ ಬೈಕ್ ಕಳ್ಳತನ ಬಯಲು – ಆರೋಪಿ ಪೊಲೀಸ್ ವಶ

ಬೈಕ್ ಸವಾರನೊಬ್ಬ ಸಂಶಯಾಸ್ಪದ ರೀತಿಯಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಸ್ಥಳೀಯ ಯುವಕರು ಸೇರಿ ಬೈಕನ್ನು ಅಡ್ಡಗಟ್ಟಿ ಹಿಡಿದಿದ್ದು, ವಿಚಾರಣೆ ನಡೆಸುವ ವೇಳೆ ಬೈಕ್ ಕಳ್ಳತನ ಕೃತ್ಯ ಬಯಲಾದ ಘಟನೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಸೆ.22ರಂದು ಅಪರಾಹ್ನ ಸಂಭವಿಸಿದೆ.

KA19 W 1906 ನಂಬರಿನ ಹೋಂಡಾ ಸ್ಪ್ಲೆಂಡರ್ ಬೈಕನ್ನು ಸುಳ್ಯ. ಭಾಗದಿಂದ ಅಪರಿಚಿತ ವ್ಯಕ್ತಿಯೋರ್ವ ಸಂಶಯಾಸ್ಪದ ರೀತಿಯಲ್ಲಿ ಪುತ್ತೂರಿನ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಕನಕಮಜಲು ಗ್ರಾಮದ ಸುಣ್ಣಮೂಲೆಯಲ್ಲಿ ಅನುಮಾನಗೊಂಡ ಸ್ಥಳೀಯರಾದ ಅಲ್ತಾಫ್ ಪೆರಾಜೆ, ಉನೈಸ್ ಪೈಚಾರು, ಶರೀಫ್ ಎ‌.ಕೆ., ಶಿಯಾಬು ಕೆ., ಮಹಮ್ಮದ್ ಸಿ ಹಾಗೂ ಸುಣ್ಣಮೂಲೆಯ ಪೂಪಿ ಅಬೂಬಕ್ಕರ್ ಅವರು ಸೇರಿ ತಡೆದು ನಿಲ್ಲಿಸಿ, ವಿಚಾರಣೆ ನಡೆಸಿದಾಗ ಬೈಕ್ ಸುಳ್ಯದಲ್ಲಿ ವೈದ್ಯರಾಗಿರುವ ಡಾ. ಭವಾನಿಶಂಕರ ಅವರೆಂದು ತಿಳಿದುಬಂದಿದ್ದು, ಆರೋಪಿಯನ್ನು ಯುವಕರು ಸೇರಿ ಸುಳ್ಯ ಪೊಲೀಸರ ವಶಕ್ಕೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.