ಸುಬ್ರಹ್ಮಣ್ಯ-ಐನಕಿದು ಪ್ರಾ.ಕೃ.ಪ.ಸ. ಸಂಘ ನಿ.ದ ಮಹಾಸಭೆ

0

32.31 ಲಕ್ಷ ಲಾಭಾಂಶ

ಸುಬ್ರಹ್ಮಣ್ಯ-ಐನಕಿದು ಪ್ರಾ.ಕೃ.ಪ.ಸ.ಸಂಘದ ವಾರ್ಷಿಕ ಮಹಾಸಭೆಯು ಸೆ. 22ರಂದು ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನ ಸುಬ್ರಹ್ಮಣ್ಯದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಜಯಪ್ರಕಾಶ ಕೂಜುಗೋಡು ಅವರ ಅಧ್ಯಕ್ಷತೆಯಲ್ಲಿ ಜರಗಿತು.

2023-2024ನೇ ಸಾಲಿನಲ್ಲಿ ಸಂಘವು 111.28 ಕೋಟಿ ರೂ. ವ್ಯವಹರಿಸಿದ್ದು, ಪ್ರಸಕ್ತ ಸಾಲಿನಲ್ಲಿ 32.31ಲಕ್ಷ ನಿವ್ವಳ ಲಾಭ ಗಳಿಸಿರುತ್ತದೆ. ವಾರ್ಷಿಕ ಮಹಾಸಭೆಯ ವರದಿಯನ್ನು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಪ್ರಕಾಶ ಕೆ.ಯಸ್. ಮಂಡಿಸಿದರು. ವರದಿ ಸಾಲಿನಲ್ಲಿ 18.87 ಕೋಟಿ ಸಾಲ ವಿತರಿಸಿ, 18.02 ಕೋಟಿ ಸಾಲ ವಸೂಲಿ ಮಾಡಿ ವರ್ಷಾಖೇರಿಗೆ 18.66 ಕೋಟಿ ಸಾಲ ಇರುತ್ತದೆ. ಶೇ. 93.71 ಸಾಲ ವಸೂಲಿಯಾಗಿರುತ್ತದೆ. ಸಂಘದ ಮಹಾಸಭೆಯ ಹಾಜರಾತಿಯಲ್ಲಿ ದಾಖಲೆಯ ಹಾಜರಾತಿ 1100ಆಗಿದ್ದು ಶೇ. 68.32 ಆಗಿರುವುದಕ್ಕೆ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಹರ್ಷ ವ್ಯಕ್ತಪಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಮಾಧವ ಡಿ, ನಿರ್ದೇಶಕರುಗಳಾದ ಸೋಮಸುಂದರ ಕೆ, ರವೀಂದ್ರ ಕುಮಾರ ರುದ್ರಪಾದ, ಮೋಹನದಾಸ ರೈ, ಸುರೇಶ ಕೋಟೆಬೈಲು, ದಾಮೋದರ ಕೆ , ಕಿರಣ ಪೈಲಾಜೆ, ಸುಬ್ರಹ್ಮಣ್ಯ ರಾವ್ ಎ, ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಕೆ.ಯಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷರಾದ ಜಯಪ್ರಕಾಶ ಕೂಜುಗೋಡು ಸ್ವಾಗತಿಸಿ ನಿರ್ದೇಶಕರಾದ ರವೀಂದ್ರ ಕುಮಾರ ರುದ್ರಪಾದ ವಂದಿಸಿದರು. ಸಂಘದ ಸಿಬ್ಬಂಧಿಗಳು ಸಹಕರಿಸಿದರು.