ಕಲ್ಮಡ್ಕ : ಕಾಳು ಮೆಣಸು ಖರೀದಿ ಕೇಂದ್ರ ಉದ್ಘಾಟನೆ

0

ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಕ್ಯಾಂಪ್ಕೋ ಲಿ.ಮಂಗಳೂರು, ನಿಂತಿಕಲ್ಲು ಶಾಖೆ ಇದರ ಸಹಯೋಗದಲ್ಲಿ ಕಾಳು ಮೆಣಸು ಖರೀದಿ ಕೇಂದ್ರದ ಉದ್ಘಾಟನೆ ಸೆ.25 ರಂದು ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆಯಿತು.

ಪ್ರಗತಿಪರ ಕೃಷಿಕ ಈಶ್ವರ ಭಟ್ ಕೈಲಾರ್ ಉದ್ಘಾಟಿಸಿ ಶುಭ ಹಾರೈಸಿದರು.

ಕಲ್ಮಡ್ಕ ಪ್ರಾಧಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ಬೆಟ್ಟ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪ್ರಗತಿ ಪರ ಕೃಷಿಕ ಗಂಗಾಧರ ಗೌಡ ಮರಕಡ, ಕ್ಯಾಂಪ್ಕೋ ನಿಂತಿಕಲ್ಲು ವ್ಯವಸ್ಥಾಪಕ ರಮೇಶ್ ಡಿ ಹಾಗೂ ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ನಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾರಾಯಣ ಪ್ರಾರ್ಥಿಸಿದರು. ಲಕ್ಷ್ಮೀನಾರಾಯಣ ನಡ್ಕ ಸ್ವಾಗತಿಸಿದರು .ಪುನೀತ್ ಮೂಲೆಮನೆ ನಿರೂಪಿಸಿದರು. ಪ್ರಶಾಂತ್ ಜೆ ವಂದಿಸಿದರು.

ಸಂಘದಲ್ಲಿ ಪ್ರತಿ ಬುಧವಾರ ಕಾಳು ಮೆಣಸು ಮತ್ತು ಅಡಿಕೆ ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದರು.