ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋ – ಓಪರೇಟಿವ್ ಸೊಸೈಟಿ ವಾರ್ಷಿಕ ಮಹಾಸಭೆ ಹಾಗೂ ಸನ್ಮಾನ ಕಾರ್ಯಕ್ರಮ

0

ಕಲ್ಲುಗುಂಡಿ ಶ್ರೀ ಅಮ್ಮನ್ ಕ್ರೆಡಿಟ್ ಕೋೂ ಓಪರೇಟಿವ್ (ರಿ)ಸೊಸೈಟಿ ವಾರ್ಷಿಕ ಮಹಾಸಭೆಯು ಸೆ 22 ರಂದು ನಿರ್ದೇಶಕರಾದ ರಾಜೇಶ್ವರಿ ಕೃಷ್ಣ ಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿಂದಿನದ ವರ್ಷದ ಖರ್ಚು – ವೆಚ್ಚ ಮತ್ತು ಆದಾಯದ ಬಗ್ಗೆ ಸೊಸೈಟಿಯ ವ್ಯವಸ್ಥಾಪಕರಾದ ಶಿವ ಪೆರುಮಾಳ್ ಮಂಡನೆ ಮಾಡಿದರು .ಬಳಿಕ ಸಂಘವು ಒಟ್ಟು 89 ರೂ ಲಕ್ಷ ವ್ಯವಹಾರ ನಡೆಸಿ, 21 ಲಕ್ಷ ರೂ ಠೇವಣಿ ಸಂಗ್ರಹವಾಗಿರುತ್ತದೆ. ಅಲ್ಲದೆ ಸದರಿ ಸಾಲಿನಲ್ಲಿ 60 ಯಶಸ್ವಿ ಕಾರ್ಡ್ ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ 350 ಕಾರ್ಡ್ ಗಳನ್ನು ವಿತರಿಸುವ ಯೋಜನೆಯನ್ನು ತರಲಿದ್ದೇವೆ ಎಂದರು.

ಬಳಿಕ ಸಭೆಯಲ್ಲಿ ಹಿರಿಯ ವ್ಯಕ್ತಿ ನ್ಯಾಶನಲ್ ಸ್ಟೋರ್ ಮಾಲಿಕ ಅಬ್ಬಾಸ್ ಅವರನ್ನು ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ ಸದಸ್ಯರು ನಿರ್ದೇಶಕರು ಬಾಲಚಂದ್ರ ತೊಡಿಕಾನ, ಸುಕುಮಾರನ್ ಸುಳ್ಯ, ಸುಕುಮಾರ್ ಕಲ್ಲುಗುಂಡಿ, ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸೊಸೈಟಿಯು ವ್ಯವಸ್ಥಾಪಕ ಶಿವ ಪೆರು ಮಾಳ್ ಸ್ವಾಗತಿಸಿ ವಂದಿಸಿದರು.