ಪಂಜ ಪ್ರಾ.ಆ. ಕೇಂದ್ರವನ್ನು ಮೇಲ್ದರ್ಜೆಗೆರಿಸುವ ಕುರಿತು ಸಭೆ: ಅನುಷ್ಠಾನ ಸಮಿತಿ ರಚನೆ

0

ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆರಿಸುವ ಕುರಿತು ಸಭೆಯು ಪಂಜ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ರವರ ಉಪಸ್ಥಿತಿಯಲ್ಲಿ ಸೆ.28 ರಂದು ನಡೆಯಿತು.

ಅನುಷ್ಠಾನ ಸಮಿತಿಯ ಗೌರವಾಧ್ಯಕ್ಷರಾಗಿ ಶಾಸಕಿ ಕು.ಭಾಗೀರಥಿ ಮುರುಳ್ಯ , ಅಧ್ಯಕ್ಷರಾಗಿ ಅಬ್ದುಲ್ ಗಫೂರ್ ಕಲ್ಮಡ್ಕ, ಉಪಾಧ್ಯಕ್ಷರಾಗಿ ಸಂತೋಷ್ ಜಾಕೆ, ಕಾರ್ಯದರ್ಶಿಯಾಗಿ ಚಿನ್ನಪ್ಪ ಸಂಕಡ್ಕ, ಉಪ ಕಾರ್ಯದರ್ಶಿಯಾಗಿ ಲಿಗೋದರ ಆಚಾರ್ಯ ನಾಯರ್ ಕೆರೆ ರವರನ್ನು ಸರ್ವಾನುಮತದಿಂದ ಆರಿಸಲಾಯಿತು.

ಸಭೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕಲ್ಕ , ಉಪಾಧ್ಯಕ್ಷ ನಾರಾಯಣ ಕೃಷ್ಣನಗರ , ಅಬ್ದುಲ್ ಗಪೂರ್ ಕಲ್ಮಡ್ಕ ,ಸಂತೋಷ್ ಜಾಕೆ, ಚಿನ್ನಪ್ಪ ಸಂಕಡ್ಕ , ಕಾರ್ಯಪ್ಪ ಗೌಡ ಚಿದ್ಗಲ್ಲು ,ಸವಿತಾರಾ ಮುಡೂರು ಲಿಗೋದರ ಆಚಾರ್ಯ, ಕುಸುಮಾದರ ಕೆರೆಯಡ್ಕ , ಶ್ರೀಮತಿ ಸುವರ್ಣನಿ ಎನ್ ಎಸ್ , ಶ್ರೀಮತಿ ಪುಷ್ಪ.ಡಿ ಪ್ರಸಾದ್ ಕಾನತ್ತೂರ್,ಪುರುಷೋತ್ತಮ ಮುಡೂರು, ದೇವಿಪ್ರಸಾದ್ ಜಾಕೆ , ಶ್ರೀಮತಿ ನೇತ್ರಾವತಿ ಕಲ್ಲಾಜೆ ಉಪಸ್ಥಿತರಿದ್ದರು.