ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ಸೆ.29 ರಂದು ನಿಧನರಾದ ವಾಸುದೇವ ಗೌಡ ಸೂರ್ಯಮನೆ ಇವರ ಮರಣ ಸಾಂತ್ವನ ನಿಧಿ ರೂ.10000/- ವನ್ನು ಪುತ್ರರಾದ ಅಶೋಕ, ಜೈಪ್ರಸಾದ್, ದಿನೋದಯ ರವರಿಗೆ ಸೆ.29ರಂದು ಸಂಘದ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆಯವರು ವಿತರಿಸಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಹರೀಶ್ ಮಾಣಿಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಚಂದ್ರಶೇಖರ ಪಾನತ್ತಿಲ, ಶೀನಪ್ಪ ಗೌಡ ಸೂರ್ಯಮನೆ ಉಪಸ್ಥಿತರಿದ್ದರು.