ಪಿಡಿಒ ರಘು ಎನ್.ಬಿ.ರವರಿಗೆ ಸ್ವಚ್ಚತಾ ಅನುಷ್ಠಾನಕ್ಕಾಗಿ ಪುರಸ್ಕಾರ

0

ಕಡಬ ತಾಲೂಕಿನ ಕಾಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ. 17ನೇ ತಾರೀಕಿನಿಂದ ಅ. 2 ತಾರೀಕಿನವರೆಗೆ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಅನುಷ್ಠಾನ ಮಾಡಿದಕ್ಕಾಗಿ ಕಾಣಿಯೂರು ಗ್ರಾಮ ಪಂಚಾಯತ್ ನ ಪಿ.ಡಿ.ಒ ರಘು ಅವರಿಗೆ ಮಂಗಳೂರಿನಲ್ಲಿ ಅ.2 ರಂದು ಸ್ವಚ್ಚತಾ ಅನುಷ್ಠಾನಕ್ಕಾಗಿ ಪುರಸ್ಕಾರ ನೀಡಿ
ಗೌರವಿಸಲಾಯಿತು.

ಕಾಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯನ್ನು ಸ್ವಚ್ಛ ಗ್ರಾಮವನ್ನಾಗಿ ಮಾಡಿ ಸ್ವಚ್ಛತೆಗೆ ಶ್ರಮವಹಿಸಿರುವ ಬಗ್ಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇದಾಗಿತ್ತು.‌ಮಂಗಳೂರಿನ ಕದ್ಮಲ್ ಕೆಂಗರಾವ್ ಪತುಭವನದ ಎದುರಿನ ಗಾಂಧಿ ಪ್ರತಿಮೆ ಎದುರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಸ್ಪಿ ಯವರ ಉಪಸ್ಥಿತಿಯಲ್ಲಿ ಗೌರವಿಸಲಾಯಿತು.