ಗುತ್ತಿಗಾರಿನಲ್ಲಿ ನಡೆದ ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ

0

170 ಜನ ಸದುಪಯೋಗ ಪಡೆದರು

ಲಯನ್ಸ್ ಕ್ಲಬ್ ಗುತ್ತಿಗಾರು ಮತ್ತು ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ
ಇವರ ಸಹಯೋಗದಲ್ಲಿ
ಸೆ.28, ಸೆ.29 ರಂದು ಬೃಹತ್ ಆಧಾರ್ ನೋಂದಣಿ ಮತ್ತು ತಿದ್ದುಪಡಿ ನಡೆಯಿತು.

ಲಯನ್ ನಿತ್ಯಾನಂದ ಮುಂಡೋಡಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕುಶಾಲಪ್ಪ ತುಂಬತ್ತಾಜೆ ಮತ್ತವರ ತಂಡದ ಈ ಸಮಾಜಮುಖಿ ಕೆಲಸ ಬಹಳಷ್ಟು ಉತ್ತಮ ಕಾರ್ಯ ಎಂದರು. ಮುಖ್ಯ ಅತಿಥಿಯಾಗಿ ಅಂಚೆ ಇಲಾಖೆ ಪುತ್ತೂರು ವಿಭಾಗದ ಆನಂದ ಗೌಡ, ನಿಕಟ ಪೂರ್ವ ಅಧ್ಯಕ್ಷ ಜಯರಾಮ ಕಡ್ಲಾರು ಉಪಸ್ಥಿತರಿದ್ದರು.


ಕುಶಾಲಪ್ಪ ತುಂಬುತ್ತಾ ಜೆ ಪ್ರಾಸ್ತಾವಿಕ ಹಾಗೂ ಸ್ವಾಗತ . ಕಾರ್ಯದರ್ಶಿ ವೇಕಪ್ಪ ಕೇನಾಜೆ ಧನ್ಯವಾದ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ
170 ಜನ ಇದರ ಉಪಯೋಗವನ್ನು ಪಡೆದು ಕೊಂಡರು.