ಐವರ್ನಾಡು ; ತೋಟ ತೊಳಿಲಾಲರ್ ಸಂಘದ ವಾರ್ಷಿಕ ಮಹಾಸಭೆ

0


ಐವರ್ನಾಡು ಪಂಚಾಯತ್ ವಿಕಾಸ ಸೌಧ ಸಭಾ ಭವನದಲ್ಲಿ ತೋಟ ತೊಳಿಲಾಲರ್ ಸಂಘ ಸುಳ್ಯ ಇದರ ವಾರ್ಷಿಕ ಮಹಾ ಸಭೆಯು ಸೆ.3 ರಂದು ನಡೆಯಿತು.ಸಂಘದ ಜೊತೆ ಕಾರ್ಯದರ್ಶಿ ಕಮಲ್ ರಾಜ್ ಸ್ವಾಗತಿಸಿದರು. ಸಂಘದ ಅಧ್ಯಕ್ಷರಾದ ಚಂದ್ರಲಿಂಗಂರವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷ ಸ್ಥಾನವನ್ನು ಸಂಘದ ಕಾರ್ಯಾಧ್ಯಕ್ಷರಾದ ಸೂರ್ಯಕುಮಾರ್ ಬೇಂಗಮಲೆ ವಹಿಸಿದ್ದರು . ಸಂಘಟನಾ ಕಾರ್ಯದರ್ಶಿ ಚಂದ್ರನ್ ರವರು ಕಳೆದ ಒಂದು ವರ್ಷದ ವರದಿಯನ್ನು ವಾಚಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ರಾಜಕೃಷ್ಣ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಘವು ಕೈಗೊಂಡಿರುವ ಕೆಲಸಗಳನ್ನು ಮತ್ತು ಮುಂದೆ ಇರುವ ಸವಾಲುಗಳನ್ನು ವಿವರಿಸಿದರು. ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಸೇರಿಸಲಾಯಿತು. ಪ್ರಮುಖ ಕೆಲಸಗಳಾದ ಈ ವರ್ಷದ ಬೋನಸ್, ಕಾಡು ಕಡಿಯುವುದು ನಿರಂತರ ಕಾರ್ಮಿಕರುಗಳನ್ನು ಖಾಯಂ ಗೊಳಿಸುವುದು ಮುಂತಾದ ಪ್ರಮುಖ ವಿಷಯಗಳನ್ನು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಇಂದಿನ ಸಭೆಯಲ್ಲಿ ನಿರಂತರ ಕಾರ್ಮಿಕ ವಿಭಾಗದ ಅಧ್ಯಕ್ಷರಾದ ಅರಣಾಚಲಮ್, ಸದಸ್ಯರುಗಳಾದ ಸರವಣ ಬೇಂಗಮಲೆ, ಸುಧಾಕರ್ ನಾಗಪಟ್ಟಣ, ಕಂದಸ್ವಾಮಿ ತೊಡಿಕಾನ, ಮೇಸ್ತ್ರಿಗಳಾದ ವಿನೋದ, ಗಣೇಶ್, ಸುರೇಶ್ ಕುಮಾರ್ ,ಸೆಲ್ವರತ್ನಂ, ರಾಮಮೂರ್ತಿ , ಧನೇಂದ್ರ ಉಪಸ್ಥಿತರಿದ್ದರು.


ಸಂಘದ ಉಪಾಧ್ಯಕ್ಷರಾದ ಶಿವ ಕೊಂಬಾರು ನಿಗಮದ ಖಾಯಂ ಕಾರ್ಮಿಕ ಸೇವೆಯಿಂದ ನಿವೃತ್ತಿ ಹೊದಿರುವ ಕಾರಣ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗದ ರಾಜ್ಯ ಜೊತೆ ಕಾರ್ಯದರ್ಶಿಯಾಗಿ ಆಯ್ಕೆಯಾದ ಸುರೇಶ್ ಕುಮಾರ್ ಕಂದಡ್ಕ ಮತ್ತು ತಾಲೂಕು ಆರೋಗ್ಯರಕ್ಷಾ ಸಮಿತಿಯ ಸದಸ್ಯರಾಗಿ ಆಯ್ಕೆ ಆಗಿರುವ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರನ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.